ಮಂಡ್ಯ : ಕೋವಿಡ್ 2 ನೇ ಅಲೆಯ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಪ್ರದೇಶ ಬಲಿಜ ಸಂಘ ನೆರವಿಗೆ ಬಂದಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ವಿ ಆರ್ ಶೈಲಜಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಪ್ರದೇಶ ಬಲಿಜ ಸಂಘ, ಚಾಮರಾಜಪೇಟೆ, ಬೆಂಗಳೂರು ಇವರಿಂದ ನೀಡಿದ ಮೆಡಿಸನ್ ಕಿಟ್ ಹಾಗೂ ಕೋವಿಡ್ ಸಂಬಂಧಿ ಪರಿಕರಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೋನಾ 1 ನೇ ಅಲೆ ಮತ್ತು 2 ನೇ ಅಲೆಯನ್ನು ಬಹಳ ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಎಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಶ್ರಮ ಮಾತ್ರವಲ್ಲದೇ, ಸಾರ್ವಜನಿಕರ, ಸಮುದಾಯಗಳ, ಸಂಘ ಸಂಸ್ಥೆಗಳ ಸಹಕಾರಕ್ಕೆ ಇದು ಒಂದು ನಿದರ್ಶನ ಎಂದರು.
ಯಾವುದೇ ವಿಪತ್ತಿನ ಸಮಯದಲ್ಲಿ ಕೇವಲ ಸರ್ಕಾರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ಸಾರ್ವಜನಿಕರು ಮತ್ತು ಸಮುದಾಯ ಒಗ್ಗಟಿನಿಂದ ಇದ್ದರೇ ನಿರ್ವಹಣೆ ಸಾಧ್ಯ ಎಂಬುವುದನ್ನ ಕರ್ನಾಟಕ ಬಲಿಜ ಸಂಘ ಮಾಡಿ ತೋರಿಸಿದೆ ಎಂದರು.
ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ್ದಕ್ಕೆ ಈ ಸಂಘಕ್ಕೆ ಅಬಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಎಚ್ಒ ಟಿ.ಎನ್ ಧನಂಜಯ, ರಾಜ್ಯ ಬಲಿಜಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್, ಸಂಘದ ಅಧ್ಯಕ್ಷ ವೆಂಕಟೇಶ್ ಬಾಬು, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರಶಾಂತ ಬಾಬು,ಎಚ್, ಎ ವೆಂಕಟೇಶ್, ಪುರುಷೋತ್ತಮ್ , ಸ್ವರ್ಣಕುಮಾರ್ , ಮೋಹನ್ ಕುಮಾರ್, ವಸಂತ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.