ಹವಾಮಾನ ಬದಲಾವಣೆ ಮತ್ತು ಬಡವರು

Source: sonews | By Staff Correspondent | Published on 4th February 2019, 6:19 PM | State News | National News | Special Report | Don't Miss |

ಕೂಡಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಹವಾಮಾನ ಬದಲಾವಣೆಯು ಹಲವು ದಶಕಗಳಿಂದ ಅಭಿವೃದ್ಧಿಶೀಲ ದೇಶಗಳು ಕಾಣುತ್ತಿದ್ದ ಅಭಿವೃದ್ಧಿಯನ್ನು ಕುಸಿಯುವಂತೆ ಮಾಡಬಹುದು.

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ಪ್ರಾಣಿಗಳನ್ನೂ ಒಳಗೊಂಡಂತೆ ಎಲ್ಲಾ ಜೀವಸಂಕುಲಗಳಿಗೆ ಒಂದಲ್ಲ ಒಂದು ಮಟ್ಟದ ಪ್ರಭಾವವನ್ನು ಬೀರುತ್ತಿದೆ. ಆದರೂ, ಅದು ಬಡವರ ಮೇಲೆ ಅದರಲ್ಲೂ ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳ ಬಡವರ ಮೇಲೆ ಎಲ್ಲರಿಗಿಂತ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ.

ಹಿಂದೆ ಹವಾಮಾನ ಬದಲಾವಣೆಯೆಂಬುದು ನಿಧಾನಗತಿಯಲ್ಲಿ ಘಟಿಸುತ್ತಿರುವ ವಿದ್ಯಮಾನವೆಂದು ಭಾವಿಸಲಾಗಿತ್ತು. ಆದರೆ ಹವಾಮಾನ ಬದಲಾವಣೆಯ ಅಧ್ಯಯನವನ್ನು ನಡೆಸುತ್ತಿರುವ ವಿಶ್ವಸಂಸ್ಥೆಯ ಬಹುಸರ್ಕಾರಗಳ ತಂಡವು ೨೦೧೮ರ ಅಕ್ಟೋಬರ್ನಲ್ಲಿ ಕೊಟ್ಟ ಗ್ಲೋಬಲ್ ವಾರ್ಮಿಂಗ್ ಆಫ್ . ಡಿಗ್ರಿ ಸೆಂಟಿಗ್ರೇಡ್ (. ಡಿಗ್ರಿ ಸೆಂಟಿಗ್ರೇಡಿನಷ್ಟು ಏರುತ್ತಿರುವ ಜಾಗತಿಕ ತಾಪಮಾನ) ಎಂಬ ವರದಿಯು ಗ್ರಹಿಕೆಯನ್ನು ತಲೆಕೆಳಗಾಗಿಸಿದೆ. ವರದಿಯ ಪ್ರಕಾರ ಜಾಗತಿಕ ತಾಪಮಾನದಲ್ಲಿ ಆಗಬಹುದಾದ . ಡಿಗ್ರಿ ಸೆಂಟಿಗ್ರೇಡಿನಷ್ಟು ಏರಿಕೆಯೂ ಸಹ ಜಾಗತಿಕವಾಗಿ ಹಲವಾರು ಕೋಟಿ ಜನರನ್ನು ಬಡತನಕ್ಕೆ ದೂಡಬಹುದು.

ಹವಾಮಾನ ಬದಲಾವಣೆಯು ಹೇಗೆ ಬಡವರ ಮೇಲೆ ಇತರರಿಗಿಂತ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈಗ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಆಹಾರ ಮತ್ತು ನೀರಿನ ಲಭ್ಯತೆಯಲ್ಲಿ ಕೊರತೆಯುಂಟಾಗಲಿದ್ದು ಅತ್ಯಾವಶ್ಯಕ ಸರಕುಗಳನ್ನು ಪಡೆದುಕೊಳ್ಳಲು ತೀವ್ರ ಸ್ಪರ್ಧೆಯನ್ನು ಹುಟ್ಟುಹಾಕಲಿದೆ. ಇದು ಈಗಾಗಲೇ ನಡೆಯುತ್ತಿರುವ ಸಂಘರ್ಷಗಳನ್ನು ತೀವ್ರಗೊಳಿಸುವುದಲ್ಲದೆ ಹಲವಾರು ಹೊಸ ಸಂಘರ್ಷಗಳ ಹುಟ್ಟಿಗೂ ಕಾರಣವಾಗಲಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ೨೦೧೫ರಿಂದ ನೀರಿನ ಬಿಕ್ಕಟ್ಟು ಪ್ರಾರಂಭವಾಯಿತು. ಮತ್ತು ನಗರವು ಜಗತ್ತಿನಲ್ಲೇ ಪ್ರಪ್ರಥಮ ನೀರಿಲ್ಲದ ನಗರವಾಗುವ ಆತಂಕವನ್ನೆದುರಿಸುತ್ತಿದೆ. ಆದರೆ ನಗರದ ಬಡವರು ವಾಸ ಮಾಡುತ್ತಿರುವ ಪ್ರದೇಶಗಳು ಹಲವಾರು ವರ್ಷಗಳ ಹಿಂದಿನಿಂದಲೂ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದು ಬಿಕ್ಕಟ್ಟಿನಿಂದಾಗಿ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗಿದೆ. ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಮಳೆಸುರಿಯುತ್ತಿದ್ದ ರೀತಿ ಮತ್ತು  ಕಾಲಾವಧಿಗಳಲ್ಲಿ ಏರುಪೇರು ಸಂಭವಿಸಿರುವುದರಿಂದ ಆಹಾರ ಉತ್ಪಾದನೆಯಲ್ಲಿ ಕುಸಿತವಾಗಿ ಉಳುವಯೋಗ್ಯ ಭೂಪ್ರದೇಶಕ್ಕಾಗಿನ ಸ್ಪರ್ಧೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಅದು ದೇಶದಲ್ಲಿನ ಜನಾಂಗೀಯ ಘರ್ಷಣೆ ಮತ್ತು ತಳಮಳಗಳು ಹೆಚ್ಚಾಗುವುದಕ್ಕೂ ಕಾರಣವಾಗಿವೆ. ಅಂಥ ಘರ್ಷಣೆಗಳು ಬಡವರ ಮೇಲೆಯೇ ಹೆಚ್ಚಿನ ಪರಿಣಾಮವನ್ನು ಬೀರಲಿದ್ದು ಇನ್ನೂ ಹೆಚ್ಚಿನ ಬಡತನ ಮತ್ತು ಸ್ಥಳಾಂತರಗೊಳ್ಳುವಂಥ ವಿಷಚಕ್ರಕ್ಕೆ ಈಡುಮಾಡಿದೆ.

ಹವಾಮಾನ ಬದಲಾವಣೆಯಿಂದ ಪದೇಪದೇ ಸಂಭವಿಸುವ ನೆರೆ ಮತ್ತು ಬರಗಳು ಆಹಾರ ಕೊರತೆಗಳಿಗೂ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಗೂ ಕಾರಣವಾಗುತ್ತವೆ. ಇದು ಹಸಿವು ಮತ್ತು ಅಪೌಷ್ಟಿಕತೆಗಳಿಗೆ ದಾರಿಮಾಡಲಿದ್ದು ಅದರ ಪರಿಣಾಮವನ್ನೂ ಸಹ ಹೆಚ್ಚಾU ಅನುಭವಿಸಲಿರುವವರು ಬಡವರೇ ಆಗಿರುತ್ತಾರೆ. ಅಹಾರ ಬಿಕ್ಕಟ್ಟಿನ ಬಗ್ಗೆ ವರ್ಲ್ಡ್ ಫುಡ್ ಪ್ರೊಗ್ರಾಮಿನ ೨೦೧೮ರ ವರದಿಯ ಪ್ರಕಾರ     ಹವಾಮಾನ ಸಂಬಂಧೀ ವಿಪತ್ತುಗಳು ಜಗತ್ತಿನ ಅದರಲ್ಲೂ ಪ್ರಮುಖವಾಗಿ ಆಫ್ರಿಕಾದ ೨೩ ದೇಶಗಳಲ್ಲಿ ಆಹಾರ ಬಿಕ್ಕಟ್ಟನ್ನು ಹುಟ್ಟುಹಾಕಿದ್ದು ಕನಿಷ್ಟ ೩೯ ದಶಲಕ್ಷ ಜನರಿಗೆ ತುರ್ತು ಸಹಾಯ ಒದಗಿಸಬೇಕಾದ ಅಗತ್ಯವನ್ನು ಸೃಷ್ಟಿಸಿದೆ.

 ಹಾಗೆಯೇ ೨೦೧೮ರ ಗ್ಲೋಬಲ್ ರಿಪೋರ್ಟ್ ಆನ್ ಇಂಟರ್ನಲ್ ಡಿಸ್ಪ್ಲೇಸ್ಮೆಂಟ್ (ಅಂತರಿಕ ಸ್ಥಳಾಂತರದ ಬಗೆಗಿನ ಜಾಗತಿಕ ವರದಿ) ಪ್ರಕಾರ  ೨೦೧೭ರಲ್ಲಿ ೧೪೩ ದೇಶಗಳು ಮತ್ತು ಭೂಭಾಗಗಳಲ್ಲಿ ಅಂತರಿಕ ಸಂಘರ್ಷ ಮತ್ತು ವಿಪತ್ತುಗಳಿಗೆ ಗುರಿಯಾಗಿ ಹೊಸದಾಗಿ . ಕೋಟಿ ಜನ ಅಂತರಿಕವಾಗಿ ಸ್ಥಳಾಂತರಗೊಳ್ಳಬೇಕಾಯಿತು. ಇದರ ಅರ್ಥ ಪ್ರತಿದಿನ ಅಂದಾಜು ೮೦,೦೦೦ ಜನ ಸ್ಥಳಾಂತರಗೊಳ್ಳುತ್ತಿದ್ದಾರೆ. ವರದಿಯ ಪ್ರಕಾರ ಚಂಡಮಾರುತಗಳು ಮತ್ತು ಪ್ರವಾಹಗಳು ಸ್ಥಳಾಂತರಗಳಿಗೆ ಪ್ರಧಾನ ಕಾರಣವಾUದ್ದು ಅನುಕ್ರಮವಾಗಿ ೭೫ ಲಕ್ಷ ಮತ್ತು ೮೬ ಲಕ್ಷ ಜನರ ಸ್ಥಳಾಂತರಗಳಿಗೆ ಕಾರಣವಾಗಿವೆ. ಢಾಕಾದ ಕರಾವಳಿಯಲ್ಲುಂಟಾದ ಪ್ರವಾಹದಿಂದಾಗಿ, ಪೊರ್ಟೋರಿಕೋದ ಮಾರಿಯಾದ ಚಂಡಮಾರುತದಿಂದಾಗಿ ಅಥವಾ ಪಶ್ಚಿಮ ಆಫ್ರಿಕಾದ ಚಾಡ್ ಸರೋವರವು ಮರುಭೂಮಿಯಾಗಿ ಪರಿವರ್ತನೆಯಾದ ಕಾರಣದಿಂದಾಗಿ ಇಂದು ಜಗತ್ತಿನೆಲ್ಲೆಡೆ ಹವಾಮಾನ ನಿರಾಶ್ರಿತರನ್ನು ಕಾಣಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ೨೧೦೦ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗಿ ಐರೋಪ್ಯ ಒಕ್ಕೂಟದ ದೇಶಗಳಿಗೆ ವಲಸೆ ಬರುವವರ ಪ್ರಮಾಣ ಶೇ.೨೮ರಷ್ಟು ಹೆಚ್ಚಬಹುದು.

ಹವಾಮಾನ ಬದಲಾವಣೆಯಿಂದಾಗಿ ನಷ್ಟಕ್ಕೊಗಾದ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಭಾರತ ದೇಶದ ಸುಮಾರು ೮೦ ಕೋಟಿ ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದು ಕೃಷಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಆಧರಿಸಿಯೇ ಬದುಕುತ್ತಿದ್ದಾರೆ. ದೇಶದ ಶೇ.೫೦ರಷ್ಟು ಕೃಷಿ ಭೂಮಿ ಮಳೆಯಾಶ್ರಿತವಾಗಿದ್ದು ಮಾನ್ಸೂ ಮಾರುತಗಳಲ್ಲಿ ಆಗುವ ಏರುಪೇರುಗಳು ಅವರ ಜೀವನಗಳ ಮೇಲೆ ತೀವ್ರವಾದ ಪರಿಣಾಮವನ್ನುಂಟು ಮಾಡುತ್ತದೆ. ಹವಮಾನ ಬದಲಾವಣೆಯಿಂದಾಗಿ ಗೋಧಿಯ ಉತ್ಪಾದನೆ ಇಳಿಮುಖವಾಗಿದ್ದು ಕಾರ್ಮಿಕರ  ಉತ್ಪಾದಕತೆಯನ್ನು ಕಡಿಮೆ ಮಾಡಿದೆಯೆಂದು ತಳಮಟ್ಟದ ಪುರಾವೆಗಳು ನುಡಿಯುತ್ತಿವೆ. ಅಧ್ಯಯನಗಳ ಪ್ರಕಾರ ಗೋಧಿ ಉತ್ಪಾದನೆಯಲ್ಲಿ ಬರುತ್ತಿರುವ ದೀರ್ಘಕಾಲಿನ ಬದಲಾವಣೆಗ ಬಗ್ಗೆ ಸಣ್ಣ ರೈತರಿಗೆ  ಅರಿವಿದ್ದು ಬದಲಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಅವರೂ ಸಹ ತಮ್ಮ ಕೃಷಿ ಅಭ್ಯಾಸಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಸಣ್ಣರೈತರಿಗೆ ಸಾಲ ಮತ್ತು ವಿಮೆಯ ಸೌಲಭ್ಯಗಳು ಎಟುಕುವುದೂ ಕಷ್ಟವಿದ್ದು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಸುಲಭದ ತುತ್ತಾಗುತ್ತಾರೆ. ಹೀಗಾಗಿ ಹವಾಮಾನ ಬದಲಾವಣೆಯು ಹಾಲಿ ಇರುವ ಬಡತನ, ಅಪೌಷ್ಟಿಕತೆ ಮತ್ತು ರೈತರ ಆತ್ಮಹತ್ಯೆಯ ಸಂದರ್ಭವನ್ನು ಮತ್ತಷ್ಟು ಬಿಗಡಾಯಿಸಲಿದೆ.

 ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಬೇಕಾದ ಹಣಕಾಸು ಬೆಂಬಲವನ್ನು ಅಭಿವೃದ್ಧಿಶೀಲ ದೇಶಗಳಿಗೆ ಒದಗಿಸದೆ ದ್ರೋಹವೆಸೆಗುತ್ತಿವೆಯೆಂದು ಭಾರತವು ಕೆಟೊವಿಸ್ನಲ್ಲಿ ೨೦೧೮ರಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಆರೋಪ ಹೊರಿಸಿತ್ತು. ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಇಂದಿನ ಹವಾಮಾನ ಬಿಕ್ಕಟ್ಟಿಗೆ ಕಿಂಚಿತ್ತೂ ಹೊಣೆಗಾರರಲ್ಲವಾದರೂ ಅದರ ದುಷ್ಪರಿಣಾಮಗಳಿಗೆ ಮಾತ್ರ ಅತಿ ಹೆಚ್ಚು ಗುರಿಯಾಗುತ್ತಿವೆ. ದೇಶಗಳು ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಹೇರಿರುವ ಹೊಂದಾಣಿಕೆಗಳೆರಡನ್ನೂ ಸಾಧಿಸಲು ಹರಸಾಹಸ ಪಡುತ್ತಾ ಎರಡೂ ಗುರಿಗಳಲ್ಲೂ ಹಿಂದೆಬೀಳುವಂತಾಗಿದೆ. ಹೀಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ದಶಕಗಳಿಂದ ಸಾಧಿಸಿರುವ ಅಭಿವೃದ್ಧಿ ಮತ್ತು ಬೆಳವಣಿಗೆಗಳು ಜಾಗತಿಕವಾಗಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಹಿನ್ನೆಡೆಗೆ ಗುರಿಯಾಗುತ್ತವೆ.

ಈಗಾಗಲೇ ಎಚ್ಚರಿಕೆಯ ಗಂಟೆಗಳು ಬಾರಿಸತೊಡಗಿವೆ. ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳಿಂದಾಗಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ನಡುವೆ, ಶ್ರೀಮಂತ ಮತ್ತು ಬಡವರ ನಡುವೆ ಮತ್ತು ಜಾಗತಿಕ ಉತ್ತರ ಮತ್ತು ಜಾಗತಿಕ ದಕ್ಷಿಣ ದೇಶಗಳ ನಡುವಿನ ಅಂತರವಂತೂ ಅಗಾಧವಾಗುತ್ತಿದೆ.

ಕೃಪೆ: Economic and Political Weekly ಅನು: ಶಿವಸುಂದರ್  

 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...