ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯ ಕಾವೂರು ಜಾಗದಲ್ಲಿ ಅತಿಕ್ರಮಿಸಿ ವ್ಯಾಪಾರ ನಡೆಸಿದ ಸಂಬಂಧ ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಯಲು ಜಾಗದ ಸುತ್ತಮುತ್ತ ತಂತಿ ಬೇಲಿಗಳನ್ನು ಹಾಕಲಾಗಿದೆ.
ಆದರೆ ಪ್ರಸ್ತುತ ಕೆಲವು ಅಕ್ರಮ ಮಾರಾಟಗಾರರು ತಂತಿ ಬೇಲಿಗಳನ್ನು ಕಿತ್ತು ಅದೇ ಸ್ಥಳದಲ್ಲಿ ಪುನರ್ ಮಾರಾಟ ಮಾಡಲಾರಂಭಿಸಿರುವುದನ್ನು ವ್ಯಾಪಾರಸ್ಥರು ಆಕ್ಷೇಪಿಸಿದ್ದಾರೆ.
ಸಾರ್ವಜನಿಕರ ಮನವಿಗೆ ಬುಧವಾರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಮ.ನ.ಪಾ ಅತಿಕ್ರಮಿತ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮ ಮಾರಾಟ ಮಾರಾಟಗಾರರನ್ನು ತೆರವುಗೊಳಿಸಲಾಯಿತು. ಇನ್ನು ಮುಂದಕ್ಕೆ ಪಾಲಿಕೆಯ ಜಾಗದಲ್ಲಿ ಈ ರೀತಿ ಅಕ್ರಮವಾಗಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.