ಸರ್ಕಾರಿ ಜಮೀನುಗಳ ಒತ್ತುವರಿ ತೆರವು - ಸಿ.ಸತ್ಯಭಾಮ

Source: sonews | By Staff Correspondent | Published on 2nd June 2020, 10:52 PM | State News |

ಕೋಲಾರ; ಜಿಲ್ಲೆಯ ಸರ್ಕಾರಿ ಜಮೀನುಗಳಾದ ಸ್ಮಶಾನ, ಗುಂಡುತೋಪು, ಬಂಡಿದಾರಿ, ಕೆರೆ ಜಮೀನುಗಳು ಒತ್ತುವರಿಯಾಗಿದ್ದು, ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಸರ್ಕಾರಿ ಸರ್ವೆನಂಬರ್‍ಗಳಲ್ಲಿ ಒಟ್ಟು 6-04 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಿಳಿಸಿದ್ದಾರೆ.

ತೆರವುಗೊಳಿಸಿದ ಜಮೀನಿನ ವಿವರ:  ಕೋಲಾರ ತಾಲ್ಲೂಕಿನ ಕಸಬಾ ಹೋಬಳಿಯ ಕೋಡಿ ಕಣ್ಣೂರು ಗ್ರಾಮದ ಕೆರೆಯ ಅಂಗಳ ಸರ್ವೆ ನಂಬರ್ 129 ರಲ್ಲಿ ವೆಂಕಟೇಶಪ್ಪ ಬಿನ್ ಮುನಿಯಪ್ಪ ಎಂಬುವರಿಂದ 0-16 ಎಕರೆ, ಸಂಗೊಂಡಹಳ್ಳಿ ಗ್ರಾಮದ ಕೆರೆ ನೀರು ಮುಳುಗಡೆ ಸರ್ವೆ ನಂಬರ್ 21 ರಲ್ಲಿ ಜಮದಗ್ನಿ ಬಿನ್ ಲೇಟ್ ಬಂಗಾರಪ್ಪ ಎಂಬುವರಿಂದ 0-16 ಎಕರೆಯನ್ನು ತೆರವುಗೊಳಿಸಲಾಗಿದೆ.

ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ಮಾಲೂರಿನ ಸರ್ಕಾರಿ ಕುಂಟೆ ಸರ್ವೆ ನಂಬರ್ 172 ರಲ್ಲಿ ತಾಯಪ್ಪ ಬಿನ್ ಮುನಿಯಪ್ಪ ಎಂಬುವರಿಂದ 0-3-08 ಎಕರೆ,ಲಲಿತಮ್ಮ ಕೋಂ ಬಾಬುರೆಡ್ಡಿ ಎಂಬುವರಿಂದ 0-02-08 ಎಕರೆ ತೆರವುಗೊಳಿಸಲಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕೊಪ್ಪ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 246 ರಲ್ಲಿ ಕಾಶಿ ಬಿನ್ ಚಿನ್ನಕಂದಪ್ಪ ಎಂಬುವರಿಂದ 0-05 ಎಕರೆ,ಗಂಗಾಧರ್ ಬಿನ್ ವೆಂಕಟಯ್ಯ ಎಂಬುವರಿಂದ 0-02 ಎಕರೆ, ಕಣ್ಣಪ್ಪ ಬಿನ್ ಪರಶುರಾಮ ಎಂಬುವರಿಂದ 0-01 ಎಕರೆ, ಕೇಶವ ಎಂಬುವರಿಂದ 0-05 ಎಕರೆ, ವೆಂಕಟೇಶ ಎಂಬುವರಿಂದ 0-05 ಎಕರೆಯನ್ನು ತೆರವುಗೊಳಿಸಲಾಗಿದೆ.

ಎಸ್ ಜಿ ಕೋಟೆ ಗ್ರಾಮದ ಗುಂಡುತೋಪು ಜಮೀನಾದ ಸರ್ವೆ ನಂಬರ್ 42 ರಲ್ಲಿ ಪಾಪಣ್ಣ ಬಿನ್‍ಶಿವಪ್ಪ  ಎಂಬುವರಿಂದ 0-10ಎಕರೆ, ಮಂಜುನಾಥ್ ಬಿನ್ ನಾರಾಯಣಪ್ಪ ಎಂಬುವರಿಂದ 0-20 ಎಕರೆ, ಶ್ರೀನಿವಾಸ್ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 2-00 ಎಕರೆ, ತಂಗರಾಜ್ ಬಿನ್ ವರದರಾಜ್ ಎಂಬುವರಿಂದ 0-05 ಎಕರೆ, ನಾರಾಯಣಸ್ವಾಮಿ ಬಿನ್ ಜಯರಾಮಯ್ಯ ಎಂಬುವರಿಂದ 0-02 ಎಕರೆ, ವೆಂಕಟಮುನಿಯಪ್ಪ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 0-05 ಎಕರೆ , ನಾರಾಯಣಸ್ವಾಮಿ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 0-05 ಎಕರೆ, ಹಾಗೂ ಡಿ ಕೆ ಹಳ್ಳಿ ಪ್ಲಾಂಟೆಷನ್ ರಾಜಕಾಲುವೆಗೆ ಸೇರಿದ ಸರ್ವೆ ನಂಬರ್ 5/1 ಮತ್ತು 5/2 ರಲ್ಲಿ ಶ್ರೀಮತಿ ರಾಣಿ ಎಂಬುವರಿಂದ 6 ಅಡಿಗಳನ್ನು ತೆರವುಗೊಳಿಸಲಾಗಿರುತ್ತದೆ.

ಕೆಜಿಎಫ್ ತಾಲ್ಲೂಕಿನ ರಾಬರ್ಟ್‍ಸನ್ ಪೇಟೆ ಹೋಬಳಿಯ ಘಟ್ಟಕಾಮದೇನಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 134ರಲ್ಲಿ ಎನ್ ರಮೇಶ್ ಬೆಂಗಳೂರು ಹಾಗೂ ಎನ್ ರಾಮು ಪೆದ್ದಪಲ್ಲಿ ಗ್ರಾಮ ಇವರಿಂದ 0-03 ಎಕರೆ, ಸರ್ವೆ ನಂಬರ್ 49ರಲ್ಲಿ ವೇಣುಗೋಪಾಲ್,ನಿರಂಜನ್,ಸತೀಶ್ ಎಂಬುವರಿಂದ 0-02ಎಕರೆ, ಹಾಗೂ ಬೇತಮಂಗಲ ಹೋಬಳಿಯ ಬೇತಮಂಗಲ ಸರ್ಕಾರಿ ಕುಂಟೆ ಸರ್ವೆ ನಂಬರ್ 556ರಲ್ಲಿ ಸುಜಾತಮ್ಮ ಕೋಂ ಸೀತರಾಮಪ್ಪ ಎಂಬುವರಿಂದ 0-10 ಎಕರೆ, ಹಾಗೂ ಕ್ಯಾಸಂಬಳ್ಳಿ ಹೋಬಳಿಯ ಸುವರ್ಣಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 51 ರಲ್ಲಿ ನಾರಾಯಣಪ್ಪ ಬಿನ್ ಮುನಿವೆಂಕಟಪ್ಪ ಎಂಬುವರಿಂದ 0-01-08 ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ.

ಮುಳಬಾಗಿಲು ತಾಲ್ಲೂಕಿನ ಕಸಬಾ ಹೋಬಳಿಯ ಹೊಸಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 21 ರಲ್ಲಿ ಆನಂದಪ್ಪ ಬಿನ್ ನಾರಾಯಣಪ್ಪ ಎಂಬುವರಿಂದ 0-03ಎಕರೆ, ಬೈರಕೂರು ಹೋಬಳಿಯ ಚೀಕೂರು ಹೊಸಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 96 ರಲ್ಲಿ ವಿ ಜೆ ಜಯರಾಮರೆಡ್ಡಿ ಬಿನ್ ವೆಂಕÀಟರೆಡ್ಡಿ ಎಂಬುವರಿಂದ 0-10 ಎಕರೆ, ರೆಡ್ಡಪ್ಪ ಬಿನ್ ಮುನಿಶಾಮಿ ಎಂಬುವರಿಂದ 0-04 ಎಕರೆ, ಚಿಕ್ಕರಾಮಯ್ಯ ಬಿನ್ ಗೋಪಾಲರೆಡ್ಡಿ ಎಂಬುವರಿಂದ 0-02 ಎಕರೆ ಹಾಗೂ ಆವಣಿ ಹೋಬಳಿಯ ದೊಡ್ಡಮಾದೇನಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 60 ರಲ್ಲಿ ರಾಮಚಂದ್ರಪ್ಪ ಬಿನ್ ತಿಮ್ಮಪ್ಪ ಎಂಬುವರಿಂದ 0-04ಎಕರೆ, ಶಂಕರಪ್ಪ ಬಿನ್ ಗೋವಿಂದಪ್ಪ ಎಂಬುವರಿಂದ 0-06 ಎಕರೆ, ವೆಂಕಟೇಶಪ್ಪ ಬಿನ್ ನಾರಾಯಣಪ್ಪ ಎಂಬುವರಿಂದ 0-03 ಎಕರೆ, ಲಕ್ಷ್ಮಪ್ಪ ಬಿನ್ ಗಂಟ್ಲಪ್ಪ ಎಂಬುವರಿಂದ 0-07 ಎಕರೆ, ಹಾಗೂ ದುಗ್ಗಸಂದ್ರ ಹೋಬಳಿಯ ಉತ್ತನೂರು ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 146ರಲ್ಲಿ ನಾರಾಯಣಸ್ವಾಮಿ ಬಿನ್ ಮುನಿಯಪ್ಪ ಎಂಬುವರಿಂದ 0-03ಎಕರೆ, ವೆಂಕಟೇಶಪ್ಪ ಬಿನ್ ರಾಮಪ್ಪ ಎಂಬುವರಿಂದ 0-02-08 ಎಕರೆ ಭೂಮಿಯನ್ನು ತೆರೆವುಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯ ಭಾಮ ಅವರು ತಿಳಿಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ


 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...