ಭಟ್ಕಳ : ಅಕ್ಟೋಬರ್ 2 ಗಾಂಧಿಜಯಂತಿಯಿಂದ ಆರಂಭವಾಗಿದ್ದ ಸ್ವಚ್ಚತೆ ಕಾರ್ಯಕ್ರಮ ಇಂದು ಭಟ್ಕಳ ಪಟ್ಟಣದ ಸಂಶುದ್ದೀನ್ ಸರ್ಕಲ್ ಆಸುಪಾಸಿನಲ್ಲಿ ಸ್ವಚ್ಚತೆ ಕೈಗೊಳ್ಳಲಾಯಿತು.
ಭಟ್ಕಳ ಪುರಸಭೆ, ತಾಲೂಕು ಆಡಳಿತ, ಜೆಸಿಐ, ಆಲ್ ಇಂಡಿಯಾ ಮೆಸೆಜ್ ಆಪ್ ಹ್ಯುಮಾನಿಟಿ, ಜಾಮಿಯಾ ಇಸ್ಲಾಮಿಯಾ ಜಂಟಿಯಾಗಿ ಸ್ವಚ್ಚತೆಯಲ್ಲಿ ಪಾಲ್ದಗೊಂಡಿದ್ದರು. ಇಂದು ನೂರಾರು ಜನರು ಸ್ವಚ್ಚತೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಾಹಿಲ್ ಆನ್ಲೈನ್ ಜೊತೆ ಮಾತನಾಡಿದ ಮೌಲಾನಾ ಕೈಯಿಸ್ ನದ್ವಿ , ಇಸ್ಲಾಂ ಧರ್ಮದಲ್ಲಿ ಸ್ವಚ್ಚತೆಗೆ ಆದ್ಯತೆ ಇದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರಾದಿಯಾಗಿ ಎಲ್ಲಾ ಧರ್ಮೀಯರು ಭಟ್ಕಳದಲ್ಲಿ ಒಂದಾಗಿ ಸ್ವಚ್ಚತೆ ಮಾಡಬೇಕು. ತಮ್ಮತಮ್ಮ ಮನೆಯಲ್ಲಿ ಕೂಡ ಸ್ವಚ್ಚವಾಗಿಟ್ಟುಕೊಂಡು ಆರೋಗ್ಯಕರ ಜೀವನ ನಡೆಸಬೇಕಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ದೇವರಾಜ, ವೇಣುಗೋಪಾಲ ಶಾಸ್ತ್ರಿ, ಸುಜಿಯಾ ಸೋಮನ್, ಭಟ್ಕಳ ಜಾಮಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು, ಜೆಸಿಐನ ಅಬ್ದುಲ್ ಜಬ್ಬರ್, ಸೋಶಿಯಲ್ ವರ್ಕರ್ ನಿಸಾರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.