ಭಟ್ಕಳ: ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿ ಚಿಕ್ಕಮಂಗಳೂರು ನಿವಾಸಿ ಶಿವುರಾಜ್(23) ಎಂದು ತಿಳಿದು ಬಂದಿದ್ದು. ಈತ ಮತ್ತು ಇತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಎಂದು ಬಂದಿದ್ದು .3 ದಿನಗಳ ಹಿಂದಷ್ಟೇ ಈತನ ತಮ್ಮ ಚಿಕ್ಕಮಂಗಳೂರಿಗೆ ಹೋಗಿರುವುದು ತಿಳಿದು ಬಂದಿದ್ದು. ಆತ್ಮಹತೆಗೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲವಾಗಿದೆ.
ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದು . ಮೃತ ಸಂಬಂಧಿಕರಿಗೆ ವಿಷಯ ತಳಿಸಿದ್ದು. ಸಂಬಂಧಿಕರು ಬರುವವವರೆಗೆ ಭಟ್ಕಳ ತಾಲೂಕಾಸ್ಪತ್ರೆಗೆ ಮೃತ ದೇಹ ಇರಿಸಲಾಗಿದೆ.