ಮುಂಡಗೋಡ: ಮುಂಡಗೋಡ ವಲಯ ಅರಣ್ಯ ಕಚೇರಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಯಲ್ಲಾನಾಯಕ ಹಮಾನಿ ಯವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಸೋಮವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಜರುಗಿದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಣ್ಯ ಇಲಾಖೆಯಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಮುಖ್ಯಮಂತ್ರಿ ಪದಕ ಪ್ರಶಸ್ತಿ ಯನ್ನು ಯಲ್ಲಾನಾಯಕ ಹಮಾನಿಯವರಿಗೆ ಪ್ರದಾನ ಮಾಡಿದರು.
2018-19ನೇ ಸಾಲಿನ ವನ್ಯ ಜೀವಿ ಸಂರಕ್ಷಣೆ, ಅರಣ್ಯ ವನ್ಯ ಜೀವಿ, ಅಪರಾಧಗಳ ತಡೆ ಮತ್ತು ವಶಕ್ಕೆ ತೆಗೆದುಕೊಳ್ಳುವುದು ಈ ಮುಂತಾದ ಅರಣ್ಯ ಇಲಾಖೆಯ ಕರ್ತವ್ಯಗಳ ಸಾಧನೆಯನ್ನು ಗುರುತಿಸಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಅರಣ್ಯ ಇಲಾಖೆಯಲ್ಲಿ ಜಿಲ್ಲೆಗೆ ಇದು ಪ್ರಥಮ ಬಾರಿಯ ಪ್ರಶಸ್ತಿಯಾಗಿದ್ದು 1ಲಕ್ಷ ನಗದು, ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.