ರಾಯಲ್ಪಾಡು : ತಪಾಸಣೆ ಮಾಡುವಂತಹ ಸಿಬ್ಬಂದಿಯವರು ಪ್ರತಿ ಅರ್ಧ ಗಂಟೆಗೊಮ್ಮೆ ಕೈತೊಳೆದು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಇಒ ಎಸ್.ಆನಂದ್ ಸಲಹೆ ನೀಡಿದರು.
ರಾಯಲ್ಪಾಡಿನ ಚಕ್ಪೋಸ್ಟ್ಗೆ ಶನಿವಾರ ಬೇಟಿ ನೀಡಿ ಮಾತನಾಡಿದರು.
ತಪಾಸಣೆ ಮಾಡುವಂತಹ ಸಿಬ್ಬಂದಿ ಮೊದಲನೆಯದಾಗಿ ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಕೆಲಸ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿ. ತಾಲೂಕಿನ ಎಲ್ಲಾ ಪಂಚಾಯಿತಿಗಳಲ್ಲಿ ಚರಂಡಿ ಕಾಪಾಡಿ, ಶುದ್ದನೀರಿನ ಘಟಕಗಳ ಬಳಿ ನೀರನ್ನು ಹಿಡಿದುಕೊಳ್ಳುವವರು ಅಂತರವನ್ನು ಕಾಪಾಡಿ ಎಂದರು.
ತಾಲೂಕಿನ ಎಲ್ಲಾ ಪಂಚಾಯಿತಿಗಳಲ್ಲಿ ಕೋವಿಡ್-19 ಕರೋನ ಬರದಂತೆ ನಿಯಂತ್ರಿಸಲು 1% ಸೋಡಿಯಂ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ . ರಾಯಲ್ಪಾಡು , ಮುದಿಮಡುಗು ಗ್ರಾ.ಪಂ.ಗಳಲ್ಲಿ ಬಾಕಿ ಇದ್ದು , ಅತಿ ಶೀಘ್ರವಾಗಿ ಎರಡು ಪಂಚಾಯಿತಿಗಳಲ್ಲಿ ಸಿಂಪಡಣೆ ಮಾಡಿಸಲಾಗುವುದು ಎಂದರು.