ಜಾತಿ ದೌರ್ಜನ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳು- ಗೋಪಾಲ್ ಗುರು

Source: sonews | By Staff Correspondent | Published on 5th March 2020, 10:12 PM | National News | Special Report |

*ಗೋಪಾಲ್ ಗುರು

ಹಲವಾರು ದಶಕಗಳ ಹಿಂದೆ ಬಿ.ಆರ್ ಅಂಬೇಡ್ಕರ್ ಅವರು ಗುರುತು ಮಾಡಿ ತೋರಿಸಿದ ಒಂದು ನಿಗೂಢ ವಿದ್ಯಮಾನವನ್ನೇ ದೌರ್ಜನ್ಯಗಳು, ಅದರಲ್ಲೂ ದಲಿತರ ಮೇಲೆ ಹೆಚ್ಚುತ್ತಲೇ ಇರುವ ದೌರ್ಜನ್ಯಗಳು ಎv ತೋರಿಸುತ್ತದೆ. ಅಸ್ಪೃಷ್ಯರ ಮೇಲೆಯೇ ಏಕೆ ದೌರ್ಜನ್ಯಗಳು ಸಂಭವಿಸುತ್ತದೆಂದು ಅವರು ಪ್ರಸಿದ್ದರು. ಅದೇ ನಿಗೂಢವು ಮತ್ತಷ್ಟು ತೀವ್ರತೆಯೊಂದಿಗೆ ಮತ್ತೆ ಮರುಕಳಿಸುತ್ತಿದೆ. ಈಗ ದೌರ್ಜನ್ಯಗಳು ಉತ್ಸವದ ಸ್ವರೂಪವನ್ನು ಪಡೆಯುತ್ತಿವೆ. ಮೊದಲನೆ ಹಂತದಲ್ಲಿ ದೌರ್ಜನ್ಯಗಳನ್ನು ಎಸಗಿ ಪೈಶಾಚಿಕ ಆನಂದವನ್ನು ಪಡೆಯುತ್ತಾರೆ. ನಂತರದ ಹಂತದಲ್ಲಿ ಅದೇ ಸಮಾಜದ ಜಾತಿ ಅಧಿಪತ್ಯವನ್ನೂ ಸಹ ಮತ್ತೊಮ್ಮೆ ಸಾಬೀತು ಮಾಡುತ್ತದೆ. ದಲಿತ ಪುರುಷ ಮತ್ತು ಮಹಿಳೆಯರನ್ನು ಬಹಿರಂಗವಾಗಿ ಬೆತ್ತಲೆ ಮೆರವಣಿಗೆ ಮಾಡಿಸುವುದು ಒಂದೆಡೆ ಪೈಶಾಚಿಕ ಆನಂದವನ್ನು ನೀಡಿದರೆ, ದಲಿತರನ್ನು ಬಹಿರಂಗವಾಗಿ ಕಟ್ಟಿಹಾಕಿ ಬಡಿಯುವುದು  ಮೇಲ್‌ಜಾತಿಗಳ ಸಾಮಾಜಿಕ ಮೇಲ್ತನವನ್ನು ಸ್ಥಾಪಿಸುವ ಯೋಜನೆಯನ್ನು ಪೂರೈಸುತ್ತದೆ. ಇಂತಹ ಜಾತಿವಾದದ ಉತ್ಸವಗಳನ್ನು ಆಗಗೊಳಿಸಿರುವುದು ಸಾಮಾಜಿಕ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಅದರ ದೃಶ್ಯ ಅವತಾರಗಳು.

ಗುಜರಾತಿನ ಊನಾ ಮತ್ತು ರಾಜಸ್ಥಾನದ ನಗೌರಾ ಘಟನೆಗಳ ಚಿತ್ರಗಳನ್ನು ಆರೋಪಿಗಳೇ ವಿಸ್ತೃತವಾಗಿ ಜಾಲತಾಣಗಳಲ್ಲಿ ಹಂಚಿದರು. ಇದು ದೌರ್ಜನ್ಯಕ್ಕೆ ಗುರಿಯಾದವರನ್ನು ಮತ್ತಷ್ಟು ಅಪಮಾನ ಮತು ಸ್ವದ್ವೇಷಗಳಿಗೆ ಗುರಿಯಾಗುವಂತೆ ಮಾಡುವ ಉದ್ದೇಶವನ್ನು ಹೊಂದಿವೆ. ಮತ್ತೊಂದು ಕಡೆ  ಆಕ್ರಮಣವನ್ನು ಮಾಡಿದವರಿಗೆ ಸಾಮೂಹಿಕ ಹೆಮ್ಮೆ ಹಾಗೂ ಗೌರವಗಳಂತಹ ಸಾಮಾಜಿಕವಾಗಿ ಉನ್ನತವಾದ ಭಾವನೆಗಳನ್ನು ಉದ್ದೀಪಿಸುವ ಉದ್ದೇಶಗಳನ್ನು ಹೊಂದಿವೆ. ಹೀಗೆ ತನ್ನೆಲ್ಲಾ ದುರುದ್ದೇಶಗಳ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳು ಮೇಲ್ಜಾತಿಗಳಲ್ಲಿ ಏರುಕ್ರಮದ ಹೆಮ್ಮೆ ಮತ್ತು ಗೌರವಗಳನ್ನು ಹುಟ್ಟುಹಾಕಿದರೆ, ದೌರ್ಜನ್ಯಗಳಿಗೆ ಗುರಿಯಾದ ದಲಿತರಲ್ಲಿ ಆತ್ಮಘನತೆಯನ್ನು ಕುಗ್ಗಿಸುತ್ತಾ ಹೋಗುತ್ತದೆ.

ಅಂದಾಜು ೨೦೦೪ರ ಆಸುಪಾಸಿನಲ್ಲಿ ಸಾಮಾಜಿಕ ಜಾಲತಾಣಗಳು ಬಳಕೆಗೆ ಬರುವ ಮುಂಚೆ ಜಾತಿ ದೌರ್ಜನ್ಯಗಳ ಸ್ವರೂಪ ಮತ್ತು ತೀವ್ರತೆಗಳನ್ನು ದಲಿತರು ಅರ್ಥಮಾಡಿಕೊಳ್ಳುವಂತೆ ಮಾಡುತ್ತಿದ್ದದ್ದು ಮುದ್ರಣ ಮಾಧ್ಯಮಗಳು. ಮುದ್ರಣ ಮಾಧ್ಯಮಗಳ ಮೂಲಕವೇ ದೌರ್ಜನ್ಯಗಳಿಗೆ ಪ್ರvಕ್ರಿಯೆಗಳನ್ನು ವ್ಯಕ್ತಪಡಿಸುತ್ತಾ ದಲಿತರು ತಮ್ಮ ನಡುವಿನಲ್ಲಿ ಒಂದು ಸಾಮೂಹಿಕತೆಯನ್ನು  ರೂಢಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಸಮಕಾಲೀನ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ದೌರ್ಜನ್ಯಕೋರರ ಮೇಲೂ ಹಾಗೂ ದೌರ್ಜನ್ಯಕೆ ತುತ್ತಾದವರ ಮೇಲೂ ಭಿನ್ನಭಿನ್ನವಾದ ಪgಣಾಮಗಳನ್ನು ಬೀರುತ್ತಿವೆ.

ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಅವರ ಸಮುದಾಯಗಳಿಗೂ ನೈತಿಕವಾಗಿ ಗಾಯವನ್ನುಂಟು ಮಾಡುವ ಸಲುವಾಗಿಯೇ ದೌರ್ಜನ್ಯಕ್ಕೆ ಬಲಿಯಾದವರ ಗಾಬರಿ ಮತ್ತು ಗಾಸಿಗೊಳಗಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಸ್ತೃತವಾಗಿ ಹರಡಲಾಗುತ್ತದೆ. ನೈತಿಕ ಗಾಯಗಳಿಂದಾಗಿ ಬಲಿಯಾದವರ ಆತ್ಮ ಘನತೆ ಕುಗ್ಗುತ್ತದೆ. ಹಾಗೂ ಮತ್ತೊಂದು ಕಡೆ ಆ ವ್ಯಕ್ತಿಗಳ ಸಮುದಾಯಗಳನ್ನು ನಿರ್ದಿಷ್ಟವಾಗಿ ಗುರಿ ಮಾಡಿಕೊಂಡು ಅಪಮಾನಗೊಳಿಸುವುದರಿಂದ ಆ ಸಮುದಾಯವೂ ಗಾಸಿಗೊಳಗಾಗುತ್ತದೆ. ಗುಜರಾತಿನ ಊನಾ ಮತ್ತು ರಾಜಸ್ಥಾನದ ನಗೌರಾ ಘಟನೆಗಳ ಚಿತ್ರಗಳನ್ನು ಆರೋಪಿಗಳೇ ವಿಸ್ತೃತವಾಗಿ ಜಾಲತಾಣಗಳಲ್ಲಿ ಹಂಚಿದರು. ಇದು ದೌರ್ಜನ್ಯಕ್ಕೆ ಗುರಿಯಾದವರನ್ನು ಮತ್ತಷ್ಟು ಅಪಮಾನ ಮತು ಸ್ವದ್ವೇಷಗಳಿಗೆ ಗುರಿಯಾಗುವಂತೆ ಮಾಡುವ ಉದ್ದೇಶವನ್ನು ಹೊಂದಿವೆ. ಮತ್ತೊಂದು ಕಡೆ  ಆಕ್ರಮಣವನ್ನು ಮಾಡಿದವರಿಗೆ ಸಾಮೂಹಿಕ ಹೆಮ್ಮೆ ಹಾಗೂ ಗೌರವಗಳಂತಹ ಸಾಮಾಜಿಕವಾಗಿ ಉನ್ನತವಾದ ಭಾವನೆಗಳನ್ನು ಉದ್ದೀಪಿಸುವ ಉದ್ದೇಶಗಳನ್ನು ಹೊಂದಿವೆ. ಹೀಗೆ ತನ್ನೆಲ್ಲಾ ದುರುದ್ದೇಶಗಳ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳು ಮೇಲ್ಜಾತಿಗಳಲ್ಲಿ ಏರುಕ್ರಮದ ಹೆಮ್ಮೆ ಮತ್ತು ಗೌರವಗಳನ್ನು ಹುಟ್ಟುಹಾಕಿದರೆ, ದೌರ್ಜನ್ಯಗಳಿಗೆ ಗುರಿಯಾದ ದಲಿತರಲ್ಲಿ ಆತ್ಮಘನತೆಯನ್ನು ಕುಗ್ಗಿಸುತ್ತಾ ಹೋಗುತ್ತದೆ. ಈ ಕಾರಣದಿಂದಾಗಿಯೇ ದಲಿತರೌ ತಮ್ಮ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ದಾಖಲಿಸಲು ಮುಂದಾಗುವುದಿಲ್ಲ. ಆದರೆ ನಿರ್ದಿಷ್ಟ ಸಮುದಾಯವನ್ನೇ ಗುರಿ ಮಾಡಿದ ದೌರ್ಜನ್ಯಗಳ ವಿರುದ್ಧ ಸಮುದಾಯದ ಯುವಕರು ಒಂದು ಗುಂಪಾಗಿ ಪ್ರಕರಣ ದಾಖಲಿಸಲು ಮುಂದಾಗಿರುತ್ತಾರೆ.  ಅಂಬೇಡ್ಕರ ಅವರ ಕಾಲದಿಂದಲೂ ಈ ಅಪಮಾನಗಳ ರುದ್ಧ ಅಥವಾ ಸಕಾರಾತ್ಮಕವಾಗಿ ಹೇಳುವುದಾದರೆ ಘನತೆ ಮತ್ತು ಆತ್ಮ ಗೌರವಗಳೆಂಬ ಹೊಸ ಭಾಷೆಯ ಮೂಲಕವೇ ದಲಿತರು ಸಂಘಟಿತರಾಗುತ್ತಿದ್ದಾರೆ. ಈ ನವ ಉದಾರವಾದಿ ಯುಗದಲ್ಲೂ ಮತ್ತೊಮ್ಮೆ ಇದೇ ಮೌಲ್ಯಗಳೇ ದಲಿತ ಸಂಘmನೆಯ ಹೊಸ ಪ್ರೇರಣೆಯಾಗುತ್ತಿದೆ. ಈ ನವ ಉದಾರವಾದಿ ರಾಜಕೀಯ ಅರ್ಥಶಾಸ್ತ್ರಕ್ಕೂ ಹೊಸ ಸಾಮುದಾಯಿಕ ಭಾಷೆಗಳಿಗೂ ಇರುವ ಸಂಕೀರ್ಣ ಸಂಬಂಧವನ್ನು ಘನಶ್ಯಾಂ ಷಾ ಅವರು ಇಪಿಡಬ್ಲ್ಯೂ ನ ೨೦೧೭ರ ಸೆಪ್ಟೇಂಬರ್ ೨ರ ಸಂಚಿಕೆಯಲ್ಲಿ ನಿಯೋ ಲಿಬರಲ್ ಪೊಲಿಟಿಕಲ್ ಎಕಾನಮಿ ಅಂಡ್ ಸೋಷಿಯಲ್ ಟೆನ್ಷನ್ಸ್ ಎಂಬ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಜಾತಿ ಆಧಿಪತ್ಯವನ್ನು ಮರುಸ್ಥಾಪನೆ ಮಾಡುವ ಸಾಧನವೆಂದು ಪರಿಗಣಿಸಲಾಗಿದೆ. ಮೇಲ್ಜಾತಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಸಾಮಾಜಿಕ ಮಾಧ್ಯಮಗಳನ್ನು ಅಪಮಾನ ಮಾಡುವ ಸಾಧನವನ್ನಾಗಿ ಬಳಸುತ್ತಿವೆ. ಅದರೆ ಅದೇ ಮಾಧ್ಯಗಳೇ ಅವರ ನಿಯಂತ್ರಣಗಳನ್ನು ದಾಟಿ ಅವರ ವಿರುದ್ಧವೂ ಹೋಗಬಹುದು. ಮಾಧ್ಯಮಗಳಲ್ಲಿ ವರದಿಯಾಗಿರುವ ನಾಗ್ಪುರ ಪೋಲಿಸರ ಹೇಳಿಕೆಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದ ವಿಡಿಯೋಗಳನ್ನು ಆಧರಿಸಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇದೆ ಪೊಲೀಸರೇ ತಾವು ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಿದ ನಂತರ ಮೇಲ್ಜಾತಿ ಆರೋಪಿಗಳಿಗೆ ತಮ್ಮ ಮೇಲೆ ಕಳ್ಳತನದ ಆರೋಪವನ್ನು ಹೊರಿಸುವಂತೆ ಸಲಹೆ ನೀಡಿ ತಮ್ಮ ವಿರುದ್ಧವೂ ಎಫ್‌ಐಆರ್ ದಾಖಲಿಸಲು ಕಾರಣರಾದರೆಂದು ದಲಿತ ಹೋರಾಟಗಾರರು ಆರೋಪಿಸಿದ್ದಾರೆ.

ಹೀಗೆ ಮೇಲ್ಜಾತಿಗಳು ದಾಖಲಿಸಿದ ಪ್ರತಿ-ಎಫ್‌ಐಆರ್ ನಿಂದಾಗಿ ಖಂಡಿತವಾಗಿ ಎಫ್‌ಐಆರ್‌ಗಳಲ್ಲೇ ವೈರುಧ್ಯಗಳು ಸೃಷ್ಟಿಯಾಗಲಿವೆ.  ಹೀಗೆ ಒಂದೇ ಪ್ರಕರಣದ ಬಗ್ಗೆ ವಿವಿಧ ಎಫ್‌ಐಆರ್‌ಗಳು ದಾಖಲಾಗುವುದರಿಂದ ಜಾತಿ ದೌರ್ಜನ್ಯದ ಸತ್ಯಗಳು ಮುಚ್ಚಲ್ಪಡುತ್ತವೆ ಅಥವಾ ಪೊಲೀಸ್ ಹಾಗೂ ಕೋರ್ಟು ಪ್ರಕ್ರಿಯೆಗಳಲ್ಲಿ ಸಡಿಲಗೊಂಡು ದುರ್ಬಲಗೊಳ್ಳುತ್ತವೆ. ಒಂದು ಪ್ರಕ್ರಿಯಾತ್ಮಕ ನೆಲೆಯಲ್ಲಿ ಪೊಲೀಸರು ಆರೋಪಿಗಳು ದಾಖಲಿಸುವ ಎಫ್‌ಐಆರ್ ಅನ್ನೂ ದಾಖಲಿಸಿಕೊಳ್ಳಬೇಕಾಗುತ್ತದೆಂದು ಹೇಳಲಾಗುತ್ತದೆ. ಆದರೆ ಇದರಿಂದಾಗಿ ತಮ್ಮ ಕಡೆಯಲ್ಲೂ ಸತ್ಯವಿದೆಯೆಂದು ವಾದಿಸಲು ಆರೋಪಿಗಳಿಗೆ ಸರಿಸಮವಾದ ಅವಕಾಶವನ್ನು ಒದಗಿಸಿದಂತಾಗುತ್ತದೆ. ಇದರಿಂದಾಗಿ ದಲಿತರು ದಾಖಲಿಸಿದ ಎಫ್‌ಐಆರ್‌ನಲ್ಲಿ ಸತ್ಯವಿರಬಹುದಾದರೂ ಮೇಲ್ಜಾv ಆರೋಪಿಗಳು ದಾಖಲಿಸಿದ ಎಫ್‌ಐಆರ್‌ಗಳೆಲ್ಲಾ ಸುಳ್ಳೇ ಆಗಿರುತ್ತದೆಂದೇನೂ ಹೇಳಲಾಗುವುದಿಲ್ಲವೆಂದು ವಾದಿಸಲು ಅವಕಾಶ ಕೊಡಲಾಗುತ್ತದೆ. ಹೀಗೆ ವಿರುದ್ಧ ಬಗೆಯ ಎಫ್‌ಐಆರ್‌ಗಳು ದಾಖಲಾಗುವದರಿಂದಾಗಿ ಜಾತಿ ದೌರ್ಜನ್ಯದ ಸತ್ಯವು ಸಂಪೂರ್ಣ ಸುಳ್ಳೆಂದು ಆಗದಿರಬಹುದು. ಆದರೆ ಜಾತಿ ದೌರ್ಜನ್ಯವೆಂಬುದು ಅವರವರ ಅಭಿಪ್ರಾಯವನ್ನಾಧರಿಸಿದ ಗೊಂದಲಮಯ ಸಂಗತಿಯಷ್ಟೇ ಎಂದಾಗುತ್ತದೆ. ಆಗ ದೌರ್ಜನ್ಯವೆಂಬ ಸತ್ಯವು ಕೇವಲ ಒಂದು ಬಗೆಯ ಅಭಿಪ್ರಾಯ ಮಾತ್ರ. ಹಾಗೂ ಅದರ ಸತ್ಯಾಸತ್ಯತೆಯನ್ನು ಸೂಕ್ತ ಕಾನೂನು ಪ್ರಕ್ರಿಯೆಯನ್ವಯ ಸಾಬೀತು ಮಾಡಬೇಕಾಗುತ್ತದೆ. ಒಮ್ಮೆ ವಿಷಯವು ಕೋರ್ಟಿನ ಮೆಟ್ಟಿಲನ್ನು ಹತ್ತಿದರೆ ಅಲ್ಲಿನ ಪ್ರಕ್ರಿಯೆಗಳ ಜೊತೆಗೆ ಸಾಗುವಷ್ಟು ಸಂಪನ್ಮೂಲಗಳು ದಲಿತರ ಬಳಿ ಇರುವುದಿಲ್ಲವಾದ್ದರಿಂದ ದಲಿತರು ಆ ಪ್ರಕ್ರಿಯೆಯಿಂದಲೇ ಹೊರದಬ್ಬಲ್ಪಡುತ್ತಾರೆ.

ಕೃಪೆ: Economic and Political Weekly   ಅನು: ಶಿವಸುಂದರ್ 

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...