ಕುಮಟಾದಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ. ಕಾರು ಚಾಲಕ ಸಾವು. ಇನ್ನೋರ್ವನಿಗೆ ಗಾಯ.
ಕುಮಟಾ : ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ಕುಮಟಾದ ದಿವಗಿ ಬಳಿ ಸಂಭವಿಸಿದೆ.
ಬೈಂದೂರು ಮೂಲದ ಮಂಜುನಾಥ ಆಚಾರಿ (೩೦) ಮೃತ ದುರ್ದೈವಿ. ಕಾರಿನಲ್ಲಿದ್ದ ಇನ್ನೋರ್ವ ರಘು ಆಚಾರಿ ಗಂಭೀರ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಹುಬ್ಬಳ್ಳಿಯಿಂದ ಮಂಗಳೂರು ಕಡೆ ತೆರಳುತಿತ್ತು. ಪೈನಾಫಲ್ ತುಂಬಿದ ಲಾರಿ ಕೇರಳದಿಂದ ಅಂಕೋಲಾ ಕಡೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.