ಬೈಂದೂರು: ಶಾಲಾ ಬಸ್-ಕಾರು ನಡುವೆ ಅಪಘಾತ - ತಪ್ಪಿದ ಇನ್ನೊಂದು ದುರಂತ

Source: s o news | By Arshad Koppa | Published on 29th June 2016, 7:05 AM | Coastal News | Incidents | Don't Miss |

ಬೈಂದೂರು, ಜೂ.28:ತ್ರಾಸಿಯಲ್ಲಿ ನಡೆದ ಶಾಲಾ ಮಕ್ಕಳ ವಾಹನ ದುರಂತ ಮಾಸುವ ಮುನ್ನವೇ ಮತ್ತೆ ಮತ್ತೆ ಶಾಲಾ ವಾಹನಗಳು ಅಪಘಾತಕ್ಕಿಡಾಗಿ  ಸಲ್ಪದರಲ್ಲಿ ಪಾರಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ .

ಶಿರೂರು ಸಮಿಪದ ಸುಂಕದಗುಂಡಿ ಕ್ರಾಸ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ಗ್ರೀನ್ ವ್ಯಾಲಿ ಶಾಲೆಯ ಶಾಲಾ ಬಸ್ ಬರುತ್ತಿದ್ದಾಗ ಸಂದರ್ಭ ಮುಂಬದಿಯಿಂದ ಬಂದ ಕಾರೊಂದು ಶಾಲಾ ವಾಹನಕ್ಕೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ಘಟನೆಯಲ್ಲಿ ಶಾಲಾ ಮಕ್ಕಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಶಾಲಾ ವಾಹನದ ಮುಂಭಾಗಕ್ಕೆ ಸಲ್ಪ ಪ್ರಮಾಣದ ಹಾನಿಯಾಗಿದೆ.

ನಿನ್ನೆಉಡುಪಿಯ ಟ್ರಿನಿಟಿ ಶಾಲೆಯ ಶಾಲಾ ಬಸ್ ಇನ್ನೊಂದು ಶಾಲಾ ಬಸ್ಸಿಗೆ ಢಿಕ್ಕಿ ಹೊಡೆದರೂ ಬಸ್ಸು ಚಾಲಕನ ಜಾಗರೂಕತೆಯಿಂದಾಗಿ ಸಂಭಾವ್ಯ ದುರಂತ ಒಂದು ತಪ್ಪಿದೆ. ಶಾಲಾ ವಾಹನಗಳ ಅಪಘಾತಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...