ಬೈಂದೂರು, ಜೂ.28:ತ್ರಾಸಿಯಲ್ಲಿ ನಡೆದ ಶಾಲಾ ಮಕ್ಕಳ ವಾಹನ ದುರಂತ ಮಾಸುವ ಮುನ್ನವೇ ಮತ್ತೆ ಮತ್ತೆ ಶಾಲಾ ವಾಹನಗಳು ಅಪಘಾತಕ್ಕಿಡಾಗಿ ಸಲ್ಪದರಲ್ಲಿ ಪಾರಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ .
ಶಿರೂರು ಸಮಿಪದ ಸುಂಕದಗುಂಡಿ ಕ್ರಾಸ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ಗ್ರೀನ್ ವ್ಯಾಲಿ ಶಾಲೆಯ ಶಾಲಾ ಬಸ್ ಬರುತ್ತಿದ್ದಾಗ ಸಂದರ್ಭ ಮುಂಬದಿಯಿಂದ ಬಂದ ಕಾರೊಂದು ಶಾಲಾ ವಾಹನಕ್ಕೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ಘಟನೆಯಲ್ಲಿ ಶಾಲಾ ಮಕ್ಕಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಶಾಲಾ ವಾಹನದ ಮುಂಭಾಗಕ್ಕೆ ಸಲ್ಪ ಪ್ರಮಾಣದ ಹಾನಿಯಾಗಿದೆ.
ನಿನ್ನೆಉಡುಪಿಯ ಟ್ರಿನಿಟಿ ಶಾಲೆಯ ಶಾಲಾ ಬಸ್ ಇನ್ನೊಂದು ಶಾಲಾ ಬಸ್ಸಿಗೆ ಢಿಕ್ಕಿ ಹೊಡೆದರೂ ಬಸ್ಸು ಚಾಲಕನ ಜಾಗರೂಕತೆಯಿಂದಾಗಿ ಸಂಭಾವ್ಯ ದುರಂತ ಒಂದು ತಪ್ಪಿದೆ. ಶಾಲಾ ವಾಹನಗಳ ಅಪಘಾತಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.