ತರಬೇತಿಗೆ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ

Source: so news | By MV Bhatkal | Published on 12th April 2019, 12:01 AM | Coastal News | Don't Miss |

ಕಾರವಾರ:ಲೋಕಸಭೆ ಚುನಾವಣೆ ತರಬೇತಿಗೆ ನಿಯೋಜನೆ ಆಗಿರುವ ಮತಗಟ್ಟೆ ಅಧಿಕಾರಿಗಳಿಗೆ ನಿಯೋಜಿತ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಕಾರವಾರ ತಹಸೀಲ್ದಾರ್ ಕಚೇರಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಕಾರವಾರ ತಾಲೂಕಿನ ಮತಗಟ್ಟೆ ಅಧಿಕಾರಿಗಳಿಗೆ (ಪಿಆರ್‍ಒ, ಎಪಿಆರ್‍ಒ, ಪಿ.ಒ) ದಿನಾಂಕ 16-04-2019ರಂದು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ನಿಗದಿಪಡಿಸಲಾಗಿದ್ದು, ತರಬೇತಿ ಕೇಂದ್ರಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು ಕಾರವಾರ ತಹಸೀಲ್ದಾರ್ ಕಚೇರಿಯಿಂದ ಹೊರಡುವ ಅಂದು ನಿಗದಿಪಡಿಸಲಾದ ಬಸ್‍ಗಳಲ್ಲಿ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಹಳಿಯಾಳಕ್ಕೆ ಹೊರಡುವ ಬಸ್ ಬೆಳಿಗ್ಗೆ 5.30ಕ್ಕೆ, ಕುಮಟಾಕ್ಕೆ ಹೊರಡುವ ಬಸ್ ಬೆಳಿಗ್ಗೆ 6.30ಕ್ಕೆ, ಭಟ್ಕಳಕ್ಕೆ ಹೊರಡುವ ಬಸ್ ಬೆಳಿಗ್ಗೆ 5.30ಕ್ಕೆ, ಶಿರಸಿಗೆ ಹೊರಡುವ ಬಸ್ ಬೆಳಿಗ್ಗೆ 5.30ಕ್ಕೆ ಹಾಗೂ ಯಲ್ಲಾಪುರಕ್ಕೆ ತೆರಳುವ ಬಸ್ ಬೆಳಿಗ್ಗೆ 6ಗಂಟೆಗೆ ಹೊರಡಲಿದೆ.
ಚುನಾವಣೆ ಸಿಬ್ಬಂದಿ ದಿನಾಂಕ 16-04-2019ರಂದು ನಿಯೋಜಿತ ವಿಧಾನಸಭಾ ಕ್ಷೇತ್ರದ ತರಬೇತಿಗೆ ತೆರಳಲು ಮುಂಚಿತವಾಗಿಯೇ ಅಂದು ತಹಸೀಲ್ದಾರ್ ಕಚೇರಿಯಲ್ಲಿ ಹಾಜರಾತಿ ನೀಡಿ ತೆರಳುವಂತೆ ಕಾರವಾರ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...