ದಾಂಡೇಲಿಯಲ್ಲಿ ಮೊಸಳೆ ಬಾಯಿಗೆ ಸಿಲುಕಿದ ಬಾಲಕ ಶವವಾಗಿ ಪತ್ತೆ.
ದಾಂಡೇಲಿ: ನಗರದ ಕಾಳಿ ನದಿಯಲ್ಲಿ ಮೊಸಳೆ ಪಾಲಾಗಿದ್ದ ಬಾಲಕನ ಮೃತದೇಹವನ್ನು ಯುವಕರ ತಂಡ ಸಿನೀಮಿಯ ರೀತಿಯಲ್ಲಿ ಪತ್ತೆ ಹಚ್ಚಿದ್ದಾರೆ.
ವಿನಾಯಕ ನಗರದಲ್ಲಿ ಭಾನುವಾರ ಮುಯೀನ್ ಮೆಹಬೂಬ್ ಅಲಿ(15) ಮೀನು ಹಿಡಿಯಲು ಹೋಗಿದ್ದಾಗ ಮೊಸಳೆ ಎಳೆದೊಯ್ದಿತ್ತು. ಘಟನೆಯಿಂದ ದಾಂಡೇಲಿ ನಾಗರಿಕರು ಬೆಚ್ಚಿಬಿದ್ದಿದ್ದರು. ಮಗನನ್ನ ಕಳೆದುಕೊಂಡ ಕುಟುಂಬದವರು ದುಃಖದಲ್ಲಿದ್ದರು.
ಕಳೆದ ಎರಡು ದಿನಗಳಿಂದ ಬಾಲಕನಿಗಾಗಿ ನದಿಯಲ್ಲಿ ಯುವಕರ ತಂಡ ರಬ್ಬರ್ ಬೋಟ್, ದೋಣಿಗಳ ಮೂಲಕ ಅರಣ್ಯ ಇಲಾಖೆ ಸಹಾಯದಿಂದ ಶೋಧ ನಡೆಸಿದ್ದರು. ಇಂದು ಮೃತದೇಹ ಪತ್ತೆವಹಚ್ಚಿದ್ದು, ಮೊಸಳೆ ಬಾಯಿಯಿಂದ ಬಾಲಕನ ಮೃತದೇಹವನ್ನ ಬಿಡಿಸಿದ್ದಾರೆ.
ಗಣೇಶ ಗುಡಿ ಲೈಪ್ ಗಾರ್ಡ್ ರವಿಕುಮಾರ್ ನಾಯ್ಕ, ಮಹಮದ್ , ಮಾಬಿನ್, ಸೋಮಶೇಖರ್, ಗಣೇಶ ಸೈಯದ್ ಸೇರಿದಂತೆ ಇತರರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.