ಮಹಾಸತಿ ಸೇವಾ ಸಂಘ ಗೊರ್ಟೆ,ಇಂಡಿಯನ್ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ
ಭಟ್ಕಳ:ಪರ್ಯಾಯ ವಯವಸ್ಥೆ ಇಲ್ಲದ ದಾನವೆಂದರೆ ರಕ್ತದಾನ ಮಾತ್ರ. ಒಂದು ಜೀವನ ಉಳಿಸಬಲ್ಲ ಶಕ್ತಿ ಇರುವದು ರಕ್ತದಾನಕ್ಕೆ ಮಾತ್ರ ಎಂದು ಕರಾವಳಿ ಕಾವಲು ಪಡೆಯ ಪೊಲೀಸ್ ನೀರೀಕ್ಷಕ ಸುರೇಶ ಜಿ. ನಾಯಕ ಹೇಳಿದರು.
ಅವರು ಭಾನುವಾರ ಗೊರ್ಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಮಹಾಸತಿ ಸೇವಾ ಸಂಘ ಗೊರ್ಟೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಮಹಾಸತಿ ಸೇವಾ ಸಂಘದ ಅಧ್ಯಕ್ಷ ಜಯಂತ ಎಂ ಮೊಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೀರೇಂದ್ರ ಕುಮಾರ, ಸ್ತ್ರೀ ರೋಗ ತಜ್ಞೆ ಡಾ. ವಿನಿತಾ ನಾಯಕ, ಪಾಂಡುರಂಗ ಜಿ. ನಾಯ್ಕ, ರಾಘವೇಂದ್ರ ನಾಯ್ಕ, ಪಾಂಡುರಂಗ ಅಳ್ವಗದ್ದೆ, ಮೋಹನ ನಾಯ್ಕ, ಪಾರ್ವತಿ ಎಂ ಮೊಗೇರ, ಸರಸ್ವತಿ ನಾಯ್ಕ, ಕೃಷ್ಣ ಮೊಗೇರ, ರಾಮ ಎಂ ನಾಯ್ಕ ಇದ್ದರು.
ಕರವಾಳಿ ಕಾವಲು ಪಡೆಯ ಪೊಲೀಸ್ ನೀರೀಕ್ಷಕ ಸುರೇಶ ಜಿ. ನಾಯಕ ಅವರ ಕುಟುಂಬ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯ ಸಂಘಗಳ ಸದಸ್ಯರು, ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಒಟ್ಟು 104 ಬಾಟಲ್ ರಕ್ತವನ್ನು ಸಂಗ್ರಹಿಸಲಾಯಿತು.ಈಶ್ವರ ಮೊಗೇರ ಕಾರ್ಯಕ್ರಮ ನಿರ್ವಹಿಸಿದರು.