ಮುಂಡಗೋಡ : ತಾಲೂಕಿನ ಅಕ್ಷರದಾಸೋಹ ಅದಿಕಾರಿüಯಾಗಿ ಸೇವೆಸಲ್ಲಿಸುತ್ತಿದ್ದ ಮಂಜುನಾಥ ಸಾಳೋಂಕೆ ಧಾರವಾಡದ ಡೈಟ್ ನ ಪ್ರಾಕಿಂತ ಉಪನ್ಯಾಸಕರಾಗಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತಾ.ಪಂ ಇಲಾಖೆ ಬಿಳ್ಕೋಡ ಸಮಾರಂಭವನ್ನು ಹಮ್ಮಿಕೊಂಡು ಮಂಜುನಾಥ ಸಾಳೋಂಕೆಯವರನ್ನು ಬಿಳ್ಕೋಡಲಾಯಿತು
ಮಂಜುನಾಥ ಸಾಳೋಂಕೆ ಮುಂಡಗೋಡ ತಾಲೂಕಿನಲ್ಲಿ ಅಕ್ಷರದಾಸೋಹ ಅಧಿಕಾರಿಯಾಗಿ 9 ವರ್ಷ ಸೇವೆ ಸಲ್ಲಿಸಿದ್ದಾರೆ ಹಾಗೂ ಕೆಲ ತಿಂಗಳ ಕಾಲ ಪ್ರಭಾರ ತಾ.ಪಂ ಕಾರ್ಯನಿರ್ವಣಾಧಿಕಾರಿಯಾಗಿ ಹಾಗೂ ಸಮಾಜಕಲ್ಯಾಣ ಅಧಿಕಾರಿಯಾಗಿ ಸೇವೆಸಲ್ಲಿಸಿ ತಾಲೂಕಿನ ಉತ್ತಮ ಅಧಿಕಾರಿಗಳಲ್ಲಿ ಇವರ ಹೆಸರೂ ಸೇರಿಕೊಂಡಿದೆ ಎಂದು ಹೇಳಲಾಗಿದೆ
ತಾ.ಪ.ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕಟ್ಟಿ, ನೂತನವಾಗಿ ಅಕ್ಷರದಾಸೋಹ ಅಧಿಕಾರಿ ರಫೀಕ ಮೀರಾನಾಯ್ಕ, ತಾ.ಪಂ ವ್ಯವಸ್ಥಾಪಕ ಪ್ರಕಾಶ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾ.ಪಂ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಬಿಳ್ಕೋಡ ಸಮಾರಂಭದಲ್ಲಿ ಭಾಗವಹಿಸಿದ್ದರು