ಹೋಂಡಾ ಎಕ್ಟಿವಾ ಮತ್ತು ಕಾರಿಗೆ ನಡುವೆ ಮುಖಾಮುಖಿ ಢಿಕ್ಕಿ:ಹಿಂಬದಿ ಸವಾರ ಸಾವು
ಭಟ್ಕಳ: ಇಲ್ಲಿನ ಬೈಲೂರು ರಾಷ್ಟ್ರೀಯ ಹೆದ್ದಾರಿ 66ರ ಬೀನಾ ವೈದ್ಯ ಕಾಲೇಜಿನ ಎದುರು ಶನಿವಾರ ಸಂಜೆ ಹೋಂಡಾ ಎಕ್ಟಿವಾ ಮತ್ತು ಕಾರಿಗೆ ಮುಖಾಮುಖಿ ಢಿಕ್ಕಿ
ಸಂಭವಿಸಿದ್ದು. ಅಪಘಾತದಲ್ಲಿ ಹೋಂಡಾ ಎಕ್ಟಿವಾದ ಹಿಂಬದಿ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಮೃತ ಪಟ್ಟ ಯುವಕ ಮನೋಜ ಮಂಜುನಾಥ ದೇವಾಡಿಗ (16)ಮತ್ತು ಬೈಕ ಸವಾರ ವಿನಾಯಕ ಭೈರಾ ದೇವಾಡಿಗ (24) ಇಬ್ಬರು ಇಲ್ಲಿನ ಬೆಂಗ್ರೆ ನಿವಾಸಿ ಎಂದು ತಿಳಿದು ಬಂದಿದ್ದು. ಮೃತ ಯುವಕ ವಿಶ್ವ ಭಾರತೀ ಪ್ರೌಢಶಾಲೆ ನಲ್ಲಿ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 85% ಗಳಿಸಿದ್ದು. ಒಂದು ತಿಂಗಳು ರಜೆ ಇರುವುದಕ್ಕಾಗಿ ಶಾಮಿಯಾನ ಕೆಲಸ ಮಾಡುತ್ತಿದ್ದ ಎನಲ್ಲಾಗಿದೆ. ಶಾಮಿಯಾನದ ಕೆಲಸದ ನಿಮಿತ್ತ ಮುರುಡೇಶ್ವರದಿಂದ ಬೈಲೂರಿಗೆ ಹೋಗುತ್ತಿದ ವೇಳೆ ಹೊನ್ನಾವರದಿಂದ ಮುರುಡೇಶ್ವರಕ್ಕೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಗಂಭೀರ ಗಾಯಗೊಂಡ
ಬೈಕ ಸವಾರ ನಿಗೆ ಉಡುಪಿ ಆದರ್ಶ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.ಈ ಬಗ್ಗೆ ಸುದ್ದಿ ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ನೂರಾರು ಜನರು ಧಾವಿಸಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಮುರುಡೇಶ್ವರ ಠಾಣೆ ಯಲ್ಲಿ ಸಿ.ಪಿ.ಐ ಕೆ.ಎಲ್ ಗಣೇಶ ಅವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.