ಹೋಂಡಾ ಎಕ್ಟಿವಾ ಮತ್ತು ಕಾರಿಗೆ ನಡುವೆ ಮುಖಾಮುಖಿ ಢಿಕ್ಕಿ:ಹಿಂಬದಿ ಸವಾರ ಸಾವು

Source: so news | By MV Bhatkal | Published on 19th May 2019, 6:35 PM | Coastal News | Don't Miss |


ಭಟ್ಕಳ: ಇಲ್ಲಿನ ಬೈಲೂರು ರಾಷ್ಟ್ರೀಯ ಹೆದ್ದಾರಿ 66ರ ಬೀನಾ ವೈದ್ಯ ಕಾಲೇಜಿನ ಎದುರು ಶನಿವಾರ ಸಂಜೆ ಹೋಂಡಾ ಎಕ್ಟಿವಾ ಮತ್ತು ಕಾರಿಗೆ ಮುಖಾಮುಖಿ ಢಿಕ್ಕಿ
ಸಂಭವಿಸಿದ್ದು. ಅಪಘಾತದಲ್ಲಿ ಹೋಂಡಾ ಎಕ್ಟಿವಾದ ಹಿಂಬದಿ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಮೃತ ಪಟ್ಟ  ಯುವಕ ಮನೋಜ ಮಂಜುನಾಥ ದೇವಾಡಿಗ (16)ಮತ್ತು ಬೈಕ ಸವಾರ ವಿನಾಯಕ ಭೈರಾ ದೇವಾಡಿಗ (24) ಇಬ್ಬರು ಇಲ್ಲಿನ ಬೆಂಗ್ರೆ ನಿವಾಸಿ ಎಂದು ತಿಳಿದು  ಬಂದಿದ್ದು. ಮೃತ ಯುವಕ ವಿಶ್ವ ಭಾರತೀ ಪ್ರೌಢಶಾಲೆ ನಲ್ಲಿ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 85% ಗಳಿಸಿದ್ದು. ಒಂದು ತಿಂಗಳು ರಜೆ ಇರುವುದಕ್ಕಾಗಿ ಶಾಮಿಯಾನ  ಕೆಲಸ ಮಾಡುತ್ತಿದ್ದ ಎನಲ್ಲಾಗಿದೆ. ಶಾಮಿಯಾನದ ಕೆಲಸದ ನಿಮಿತ್ತ ಮುರುಡೇಶ್ವರದಿಂದ ಬೈಲೂರಿಗೆ  ಹೋಗುತ್ತಿದ ವೇಳೆ ಹೊನ್ನಾವರದಿಂದ ಮುರುಡೇಶ್ವರಕ್ಕೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ  ಗಂಭೀರ ಗಾಯಗೊಂಡ
ಬೈಕ ಸವಾರ ನಿಗೆ ಉಡುಪಿ ಆದರ್ಶ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.ಈ ಬಗ್ಗೆ ಸುದ್ದಿ ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ  ನೂರಾರು ಜನರು ಧಾವಿಸಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಮುರುಡೇಶ್ವರ ಠಾಣೆ ಯಲ್ಲಿ ಸಿ.ಪಿ.ಐ ಕೆ.ಎಲ್ ಗಣೇಶ ಅವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...