ಭಟ್ಕಳ: ಬೈಕ್ ಗಳ ನಡುವೆ ಅಫಘಾತ, ಓರ್ವ ಸಾವು, ಇಬ್ಬರು ಗಂಭೀರ

Source: S O News service | By I.G. Bhatkali | Published on 14th January 2022, 11:52 PM | Coastal News |

ಭಟ್ಕಳ: ಸಾಗರ ರಸ್ತೆಯ ಕಲ್ಲಾಬೇ ಕ್ರಾಸ್‌ನಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ 7:30ರ ಸುಮಾರಿಗೆ ತಾಯಿ ಸರೋಜ ಬಾದಿ ಮತ್ತು ಮಗ ರಮೇಶ ಬಾದಿ ಎಕ್ಟಿವಾ ಬೈಕ್‌ನಲ್ಲಿ ಕುಂಟವಾಣಿಯಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಮೋಟಾರ್‌ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಭಟ್ಕಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವಾಗ ಓರ್ವ ಗಾಯಾಳು ಪ್ರದೀಪ್ ರಾಮಯ್ಯ ಗೊಂಡ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ..

ಎಕ್ಟಿವಾ ಬೈಕ್ ನಲ್ಲಿದ್ದ ತಾಯಿ ಸರುಜಾ ಕೃಷ್ಣ ಬಂಡೆ (55) ಮತ್ತು ಮಗ ರಮೇಶ ಮಾದೇವ ಬಂಡೆ (20) ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...