ಭಟ್ಕಳ: ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಭಟ್ಕಳ: ಸ್ವಿಫ್ಟ್ ಕಾರು ಡಿಕ್ಕಿಯಾಗಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಆರ್.ಎನ್.ಎಸ್.ಆಸ್ಪತ್ರೆ ಬಳಿ
ಸಂಭವಿಸಿದೆ.
ಬೈಕ್ ಚಲಾಯಿಸು ತ್ತಿದ್ದ ದೇವಾ ಮರಾಠಿ (೨೯) ಮೃತಪಟ್ಟ ದುದೈ೯ವಿಯಾಗಿದ್ದಾನೆ. ಹಿಂಬದಿ ಸವಾರ ಚಂದ್ರಾ ರಾಮಾ ಮರಾಠಿ (೨೮) ಗಂಭೀರ ವಾಗಿ ಗಾಯಗೊಂಡ ವ್ಯಕ್ತಿ ಯಾಗಿದ್ದು, ಈತನನ್ನು ಆರ್. ಎನ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧಾರವಾಡ ಜಿ.ಪಂ.ದಲ್ಲಿ ಅಧಿಕಾರಿಯಾಗಿರುವ ರಾಜಶೇಖರ ಕುಟುಂಬ ಮಣಿಪಾಲದಿಂದ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದರು.
ಕಾರಿನಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.