ನಿತೀಶ್ ಕುಮಾರ್‍ರಿಂದ ಮುಸ್ಲಿಮರ ತುಷ್ಟಿಕರಣಕ್ಕಾಗಿ ಹೊಸ ತಂತ್ರ 

Source: sonews | By Staff Correspondent | Published on 7th August 2017, 11:38 PM | National News | Don't Miss |

ಹೊಸದಿಲ್ಲಿ: ವಂಚನೆಗೊಳಗಾದೆವು ಎನ್ನುವ ಅನಿಸಿಕೆಯಿಂದ ಮುಸ್ಲಿಂ ಅಲ್ಪಸಂಖ್ಯಾತರು ತನ್ನಿಂದ ದೂರವಾಗುತ್ತಿದ್ದಾರೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತನ್ನ ಜೊತೆಗಿರಿಸಲಿಕ್ಕಾಗಿ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಸಂಘಪರಿವಾರದೊಂದಿಗೆ ಸೇರಿ ಸರಕಾರ ರಚಿಸಿದ್ದಕ್ಕೆ ಟೀಕೆ ಕೇಳಿಬರುತ್ತಿರುವ ಬೆನ್ನಿಗೆ  ಬಿಹಾರದಲ್ಲಿ ಜನರಗುಂಪಿನಿಂದ  ದಾಳಿ ನಡೆದಿರುವುದು ನಿತೀಶ್‍ರಲ್ಲಿ ಆತಂಕವನ್ನು ಸೃಷ್ಟಿಸಿದೆ.

 

ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದ ಕೆಲಸಗಳನ್ನು ಅವಲೋಕನ ನಡೆಸಲು ನಿತೀಶ್ ಕುಮಾರ್ ತುರ್ತು ಸಭೆಯನ್ನು ಕರೆದು ಸೇವೆಯನ್ನು ಉತ್ತಮಪಡಿಸಲು ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಹಾರದಲ್ಲಿ 2200 ಮದ್ರಸಾಗಳಿದ್ದು, ಅಲ್ಲಿಗೆ ತುರ್ತಾಗಿ ಸೌಲಭ್ಯಗಳನ್ನು ಮತ್ತುಆರ್ಥಿಕ ಹಾಗೂ  ನಿರ್ಮಾಣ ಕಾಮಗಾರಿಗೆ ನೆರವನ್ನು ಒದಗಿಸಲಾಗುವುದೆಂದು ನಿತೀಶ್ ಘೋಷಿಸಿದರು. ತರಗತಿ ಕೋಣೆಗಳು, ಲೈಬ್ರರಿ, ಲ್ಯಾಬರೇಟರಿಗಳಿಗೆ ಸರಕಾರ ನೆರವು ನೀಡಲಿದೆ. ಮದ್ರಸಾದಿಂದ  10, 12 ನೆ ತರಗತಿ ಪಾಸಾಗುವ ವಿದ್ಯಾರ್ಥಿಗಳಿಗೆ ತಲಾ 10,000ರೂಪಾಯಿ ನೀಡಲಾಗುವುದು. ವಕ್ಫ್ ಮಂಡಳಿಗೆ ಎಲ್ಲ  ಜಿಲ್ಲೆಗಳಲ್ಲಿ ಕಚೇರಿಸಹಿತ ಒಂದು ಕಟ್ಟಡ ಹಾಗೂ ಲೈಬ್ರರಿ, ಒಂದು ಕಮ್ಯುನಿಟಿ ಹಾಲ್‍ನ್ನು ಬಿಹಾರ ಸರಕಾರ ನಿರ್ಮಿಸಿಕೊಡಲಿದೆ.

ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾದ ದಿನ ಮುಸ್ಲಿಂ ಶಾಸಕರಿಗೆ ಶುಕ್ರವಾರದ ಜುಮಾ ನಮಾಝ್‍ಗೆ ಹೋಗಲಿಕ್ಕಾಗಿ ನಿತೀಶ್ ತನ್ನ ಭಾಷಣವನ್ನು ಕಡಿತಗೊಳಿಸಿದ್ದರು. ಮುಸ್ಲಿಮರನ್ನು ಕೈಬಿಟ್ಟಿಲ್ಲ ಎನ್ನುವ ಅಭಿಪ್ರಾಯವನ್ನು  ಸೃಷ್ಟಿಸಲು ಈ ಎಲ್ಲ ತಂತ್ರಗಳನ್ನು ನಿತೀಶ್ ಪ್ರಯೋಗಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ನಾವು ವಂಚಿತರಾಗಿದ್ದೇವೆ ಎನ್ನುವ ಅನಿಸಿಕೆಯನ್ನು ಮುಸ್ಲಿಮರಿಂದ ಹೋಗಲಾಡಿಸಲು ಈ ಕ್ರಮಗಳನ್ನು ನಿತೀಶ್ ಕೈಗೊಂಡಿದ್ದಾರೆ. ಬಿಹಾರದ ಪ್ರಮುಖ ಮುಸ್ಲಿಂ ನಾಯಕ ಅಲಿ ಅನ್ವರ್ ಬಿಜೆಪಿ ಸಖ್ಯ ಆತ್ಮಹತ್ಯೆಯೆಂದು ಹೇಳಿದ್ದರು. ಶರದ್ ಯಾದವ್ ನಿತೀಶ್‍ರ ಕ್ರಮದಿಂದ ಮುನಿಸಿಕೊಂಡಿದ್ದಾರೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...