ಭಟ್ಕಳ:ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊರ್ವರು ಅಕ್ಕನ ಮನೆಯ ಪಕ್ಕದ ಇರುವ ಖಾಸಗಿಯವರ ಬಾವಿಗೆ ಹಾರಿ ಮಹಿಳೆಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ಮೂಲತಃ ಅಳ್ವೆಕೋಡಿಯ ನಿವಾಸಿ ಮಾಸ್ತಮ್ಮ ಮೊಗೇರ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಕಳೆದ7 ವರ್ಷ ಗಳಿಂದ ಕ್ಯಾನ್ಸರ್ ಖಾಲಿಲೆಯಿಂದ ಬಳಲುತ್ತಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳತ್ತಿದ್ದರು ಎನ್ನಲಾಗಿದೆ. ಜನವರಿಯಲ್ಲಿ ಇವರ ಪತಿ ಮೃತಪಟ್ಟಿದ್ದು ತದನಂತರ ಇವರು ಅವರ ಅಕ್ಕನ ಮನೆಯಲ್ಲೆ ವಾಸಿಸುತ್ತಿದ್ದರು. ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದರು.
ಬುಧವಾರ ತನ್ನ ಅಕ್ಕನ ಮನೆಯ ಪಕ್ಕದ ಬಾವಿಯಲ್ಲಿ ಇವರ ಶವ ಪತ್ತೆಯಾಗಿದೆ. ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಪಾಂಡು ಮಂಜು ಮೊಗೇರ್ ದೂರು ನೀಡಿದ್ದು ಸ್ಥಳಕ್ಕೆ ಗ್ರಾಮೀಣ ಠಾಣೆಯ ಎ.ಎಸ್.ಐ ಮಂಜುನಾಥ ಗೌಡ, ತನಿಖಾಧಿಕಾರಿ ದಿನೇಶ ದಾತೇಕರ,ಸಿಬ್ಬಂದಿ ದೀಪಕ್ ನಾಯಕ,ಮಲ್ಲಿಕಾರ್ಜುನ ನಾಯ್ಕ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.