ಭಟ್ಕಳ: ನಗರದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.
ದಾನಿಗಳು ನೀಡಿದ ಸುಮಾರು 104 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸುರೇಶ ನಾಯಕ ಮಕ್ಕಳಲ್ಲಿ ಶಿಕ್ಷಣ ಪಡೆಯುವ ಗುರಿ ಮತ್ತು ಶ್ರದ್ಧೆ ಇದ್ದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ರೂಪಾ ಖಾರ್ವಿ ಉಪಸ್ಥಿತರಿದ್ದರು.
ದಾನಿಗಳಾದ ಚಂದ್ರು ನಾಯ್ಕ ಚೌಥನಿ,ಗಣಪತಿ ನಾಯ್ಕ ತಲಾನ,
ಸುಬ್ರಾಯ ಎಚ್. ನಾಯ್ಕರ ಸಹಕಾರ ಸ್ಮರಿಸಲಾಯಿತು. ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯ ಗಣಪತಿ ಶಿರೂರು ಸ್ವಾಗತಿಸಿದರು. ರವಿರಾಜ ಚೌಕಿಮನೆ ನಿರೂಪಿಸಿದರು. ಶಂಭು ಗೌಡ ವಂದಿಸಿದರು