ಭಟ್ಕಳ: ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ (ಅಸೋಸಿಯೇಶನ್ ಫಾರ್ ಪ್ರೋಟೆಕ್ಷನ್ ಆಫ್ ಹ್ಯುಮನ್ ರೈಟ್ಸ್) ವತಿಯಿಂದ ಫೆ.9ರಂದು ರಾತ್ರಿ 9ಗಂಟೆಗೆ ನವಾಯತ್ ಕಾಲೋನಿಯ ತಂಝೀಮ್ ಮೈದಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಾನೂನು ಜಾಗೃತಿ ಸಮಾವೇಶ ಆಯೋಜಿಲಾಗಿದೆ ಎಂದು ಸಂಸ್ಥೆಯ ಉ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಮಷಾಯಿಖ್ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
'ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಆಪಾಯಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಪಾತ್ರ' ಎಂಬ ವಿಷಯದಲ್ಲಿ ಸಭೆಯನ್ನುದ್ದೇಶಿಸಿ ಬೆಂಗಳೂರಿನ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ಬಿ.ಟಿ.ವೆಂಕಟೇಶ್ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ವಲಿ ರಹಮಾನಿ ಮಾತನಾಡಲಿದ್ದು ಎ.ಪಿ.ಸಿ.ಆರ್. ರಾಜ್ಯ ಪ್ರಧಾನ ಕಾರ್ಯದರ್ಶಿ ನಿಯಾಝ್ ಮಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಎ.ಪಿ.ಸಿ.ಆರ್. ಸಂಸ್ಥೆ ದೇಶದಲ್ಲಿ ಜಾತಿ, ಮತ ಬೇಧವೆನ್ನದೆ ಬಡವರ, ದಲಿತ, ಹಿಂದುಳಿದವರಿಗೆ ಕಾನೂನು ರಕ್ಷಣೆಯನ್ನು ನೀಡುತ್ತಿದ್ದು ಅನ್ಯಾಯಕ್ಕೊಳಗಾದವರಿಗೆ ನ್ಯಾಯವನ್ನು ದೊರಕಿಸಿಕೊಡುತ್ತಿದೆ. ಜನರಲ್ಲಿ ಕಾನೂನು ಜಾಗೃತಿ ಮೂಡಿಸುವುದರೊಂದಿಗೆ ದೇಶದ ಪ್ರಗತಿಯಲ್ಲಿ ಯುವಕರು ವಹಿಸಬೇಕಾದ ಪಾತ್ರದ ಕುರಿತಂತೆ ಅದು ಮಾತನಾಡುತ್ತದೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಜರಗುವ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು ತಾವು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.