ಬಿಡಾಡಿ ದನಗಳಿಂದಾಗಿ ತೊಂದರೆಗೀಡಾಗುತ್ತಿರುವ ಜನ

Source: S O News service | By Staff Correspondent | Published on 26th October 2016, 11:36 PM | Coastal News | State News | Don't Miss |

ಭಟ್ಕಳ: ಭಟ್ಕಳದಲ್ಲಿ ಇತ್ತಿಚಿನ ದಿನಗಳಲ್ಲಿ ಗೋರಕ್ಷಕ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಬಿಡಾಡಿ ಜಾನುವಾರುಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದ್ದು ಎಲ್ಲಿಬೇಕಲ್ಲಿ ಠಿಕಾಣಿ ಹೂಡುವ ಬಿಡಾಡಿ ದನಗಳಿಂದ ಜನರು ಮಾತ್ರ ಹಲವು ತೊಂದರೆಗಳಿಗೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬಿಡಾಡಿ ಜಾನುವಾರು ಮತ್ತು ನಾಯಿಗಳ ಕಾಟ ವಿಪರೀತವಾಗಿದ್ದು, ನಿಯಂತ್ರಣವೂ ಇಲ್ಲ, ರಕ್ಷಣೆಯೂ ಇಲ್ಲ ಎಂಬಂತಾಗಿದೆ. ಇದನ್ನು ನೆಪಮಾಡಿಕೊಂಡ ಜಾನುವಾರು ಕಳ್ಳರು ರಾತ್ರಿ ಸಮಯದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದು ಜಾನುವಾರುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ಕ್ಯಾಮರಾಗಳು ಸೆರೆ ಹಿಡಿದಿವೆ. ಇವುಗಳನ್ನು ರಕ್ಷಿಸಲೆಂದೇ ಕೆಲ ಸ್ವಯಂ ಘೋಷಿತ ಗೋರಕ್ಷಕರು ಹುಟ್ಟಿಕೊಂಡಿದ್ದು ಇವರಿಂದಾಗಿ ಸಮಾಜದ ಶಾಂತಿ ಹದಗೆಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಜಾನುವಾರುಗಳನ್ನು ಬೇಕಾಬಿಟ್ಟಿಯಾಗಿ ವಾರಿಸುದಾರರಿಲ್ಲದೆ ನಗರ ಪ್ರದರ್ಶನಗೈಯ್ಯಲು ಬಿಟ್ಟಿರುವುದರ ವಿರುದ್ಧ ಶಾಂತಿ ಪ್ರಿಯರು ಅಸಮಧಾನ ವ್ಯಕ್ತಪಡಿಸುತ್ತಿದ್ದು ಜಾನುವಾರಗಳ ಮೇಲೆ ಅಷ್ಟೊಂದು ಕರುಣೆ, ಮಮತೆ ಇರುವವರು ಅವುಗಳನ್ನು ರಸ್ತೆಯ ಮೇಲೆ ಪ್ಲಾಸ್ಟಿಕ್ ಮತ್ತಿತರ ಜೀವತೆಗೆಯುವ ವಸ್ತುಗಳನ್ನು ತಿನ್ನುವುದರಿಂದ ತಪ್ಪಿಸಿ ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಕೊಂಡು ಹುಲ್ಲು ಮೇವು ಹಾಕಿ ರಕ್ಷಣೆ ಮಾಡಲಿ, ಇದನ್ನು ಬಿಟ್ಟು ಜಾನುವಾರು ಕಳ್ಳತನ ಮಾಡಲಾಗುತ್ತಿದೆ ಎಂದು ಬಿಂಬಿಸಿ ಒಂದು ಸಮುದಾಯದ ವಿರುದ್ಧ ದ್ವೇಷಾ ಸಾಧನೆ ಮಾಡುತ್ತಿರುವುದು ಸರಿಯಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.  
ಈ ಬಿಡಾಡಿ ದನಗಳು ಇಲ್ಲಿನ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು ಇದಕೊಂದು ಗತಿ ಕಾಣಿಸದೆ ಹೋದಲ್ಲಿ ನಗರದ ಶಾಂತಿ ಸುವೆವಸ್ಥೆ ಹದಗೆಡಬಹುದು ಎಂಬ ಅನುಮಾನಗಳು ಪೊಲೀಸರಲ್ಲಿ ಕಾಡತೊಡಗಿದೆ. 

ಎಲ್ಲಿಂದಲೋ ಬಂದ ಇದೀಗ ವಾರಸುದಾರರಿಲ್ಲದೇ ತಿರುಗುತ್ತಿರುವ ಗಜ ಗಾತ್ರದ ಎತ್ತುಗಳಿಗೆ ರಸ್ತೆ ಹಾಗೂ ರಸ್ತೆಯ ಪಕ್ಕದ ಖಾಲಿ ಜಾಗಗಳು ವಿಶ್ರಾಂತಿಯ ತಾಣವಾಗಿದೆ. ವಾಹನ ಸಂಚಾರಕ್ಕೆ ಅಪಾಯವನ್ನು ತಂದಿಟ್ಟ ಉದಾಹರಣೆಗಳಿವೆ. ಬಸ್ ನಿಲ್ದಾಣ, ಹೊಟೆಲ್ ಎಲ್ಲೆಂದರಲ್ಲಿ ಪಾದಚಾರಿಗಳಿಗೂ ಕೆಲ ದೈತ್ಯ ಜಾನುವಾರುಗಳ ನೋಟ ಭಯವನ್ನು ತರುತ್ತಿದೆ. ಇದಲ್ಲದೇ ಕೊಟ್ಟಿಗೆಗೆ ಹೋಗಲು ಮನಸ್ಸು ಬಾರದ ಸ್ಥಳೀಯ ಜಾನುವಾರುಗಳೂ ಅಲ್ಲಲ್ಲಿ ಪೇಟೆಯ ವಿಶ್ರಾಂತಿ, ತಿರುಗಾಟವನ್ನು ರೂಢಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುಗಳನ್ನು ರಸ್ತೆಗೆ ಬಿಟ್ಟವರನ್ನು ಪತ್ತೆ ಹಚ್ಚುವುದು ಭಟ್ಕಳ ಪುರಸಭೆ ಹಾಗೂ ಪೊಲೀಸರಿಗೆ ಕಷ್ಟವಾಗುತ್ತಿದೆ. ರಸ್ತೆಯ ಅಂಚಿನ ತ್ಯಾಜ್ಯಗಳು ನಾಯಿ ಹಾಗೂ ಬಿಡಾಡಿ ಜಾನುವಾರುಗಳಿಗೆ ಆಹಾರವಾಗುತ್ತಿವೆ.

ಪ್ರಾಣಿ ಪ್ರಿಯರು ಈ ಬಗ್ಗೆ ಚಕಾರ ಎತ್ತಿದ ಉದಾಹರಣೆಗಳು ತೀರ ಕಡಿಮೆ. ಪ್ರತಿಭಟನೆಯಂತೂ ಇಲ್ಲವೇ ಇಲ್ಲ! ಭಟ್ಕಳ ಪುರಸಭೆ ಒಂದೆರಡು ಬಾರಿ ಬಿಡಾಡಿ ಜಾನುವಾರುಗಳನ್ನು ಎಳೆದು ತಂದು ಕಟ್ಟಿ ನಿಯಂತ್ರಣಕ್ಕೆ ಮುಂದಾಯಿತಾದರೂ ಸಾಕಿ ಸಲಹುವ ದಾರಿ ಇಲ್ಲದೇ ಕೈಯನ್ನು ಕೊಡವಿಕೊಂಡು ವರ್ಷವೇ ಕಳೆದು ಹೋಗಿದೆ. ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಕಳ್ಳರ ದೃಷ್ಟಿ ಜಾನುವಾರುಗಳ ಮೇಲೆ ನೆಟ್ಟಿದೆ. ಬಿಡಾಡಿ ಜಾನುವಾರುಗಳನ್ನು ವಾಹನದಲ್ಲಿ ಕಟ್ಟಿ ಕದ್ದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೊಂದೆಡೆ ಊರು, ಕೇರಿಯ ಸಿಸಿಟಿವಿಯಲ್ಲಿ ಹಿಂಸಾತ್ಮಕ ಜಾನುವಾರು ಕಳ್ಳತನದ ದೃಶ್ಯಗಳಿಗಾಗಿ ಹುಡುಕಾಟ ಸುರುವಾಗಿದೆ. ಆದರೆ ಜಾನುವಾರುಗಳಿಗೆ ವಾರಸುದಾರರೇ ಸಿಗುತ್ತಿಲ್ಲ. ದೂರುದಾರರೂ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಟ್ಕಳ ಶಹರ ಠಾಣಾ ಎಸೈ ಕುಡಗುಂಟಿ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೆ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಡುವೆ ಭಟ್ಕಳದ ನೂರಾರು ಸಂಖ್ಯೆಯಲ್ಲಿರುವ ಗೋರಕ್ಷಕರು ಹಾಗೂ ಸಂಘಟನೆಗಳು ಬಿಡಾಡಿ ಜಾನುವಾರುಗಳ ರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಈ ಮೂಲಕ ಜಾನುವಾರುಗಳ ರಕ್ಷಣೆಗೆ ತಮ್ಮ ಬದ್ಧತೆಯನ್ನು ಮೆರೆಯಬೇಕು ಎಂಬ ಆಶಯ ಇಲ್ಲಿನ ಜನರದ್ದಾಗಿದೆ. ಇದಕ್ಕೆ ಹೊಂದಿಕೊಂಡು ಭಟ್ಕಳ ಪುರಸಭಾ ಆಡಳಿತವೂ ಬಿಡಾಡಿ ಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಬಿಜಪಿ ಮುಖಂಡ ಗೋವಿಂದ ನಾಯ್ಕ್ ‘ಜಗತ್ತಿನಲ್ಲಿ ಎಲ್ಲ ಪ್ರಾಣಿ, ಪಕ್ಷಿಗಳಿಗೆ ಬದುಕುವ ಹಕ್ಕಿದೆ. ರಾತ್ರಿ ಬೆಳಗಾಗುವುದರೊಳಗಾಗಿ ಹಣ ಗಳಿಸಲು ಅವುಗಳನ್ನು ಹೊತ್ತೊಯ್ಯುವುದು ಅಕ್ಷಮ್ಯ ಅಪರಾಧ. ಈ ಕುರಿತು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುವುದರ ಬಗ್ಗೆಯೂ ಪಾಲನೆ ಮಾಡುವವರು ಎಚ್ಚರ ವಹಿಸಬೇಕು’ ಎನ್ನುತ್ತಾರೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...