ಭಟ್ಕಳ : ಮುರ್ಡೆಶ್ವರದ ಹೆರಾಡಿಯಲ್ಲಿ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಬಂಗಾರ ದೀಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಜಾನನ ಗಣಪ ನಾಯ್ಕ ಎಂಬುವವರ ಮನೆಯೇ ಕಳ್ಳತನವಾಗಿದೆ. ಅಕ್ಟೋಬರ್ 23 ರಂದು ಬೆಳಿಗ್ಗೆ ಗಜಾನನ ತಮ್ಮ ಹೆಂಡತಿ ಜೊತೆಗೆ ಮೂಲ ಮನೆಯಾದ ಹೊನ್ನಾವರಕ್ಕೆ ತೆರಳಿದ್ದರು. 24 ರಂದು ಮನೆಗೆ ಬಂದಾಗ ಯಾರೋ ಕಳ್ಳರು ಬೀಗವನ್ನು ಒಡೆದಿರುವುದು ಗೊತ್ತಾಗಿದೆ. ಒಳಗೆ ನೋಡಿದಾಗ ಬಾಗಿಲು ತೆರೆದು ಕಪಾಟಿನ ಲಾಕರನ್ನು ಒಡೆದಿರುವುದು ಗೊತ್ತಾಗಿದೆ. ಕಪಾಟಿನಲ್ಲಿದ್ದ 173 ಗ್ರಾಂ ತೂಕದ ವಿವಿಧ ಮಾದರಿಯ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣ 35,000=00 ರೂ ಕಳುವು ಮಾಡಲಾಗಿದೆ.
ಆಭರಣಗಳ ಮೊತ್ತ ಒಟ್ಟು 8,65,400-00 ರೂ. ಎಂದು ಅಂದಾಜಿಸಲಾಗಿದೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.