ಭಟ್ಕಳ:ಇಲ್ಲಿನ ತೆರ್ನಮಕ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಚರ್ಚ್ ಕ್ರಾಸ್ ಬಳಿ ಐ.ಆರ್.ಬಿ ಯ ಅಪಾಯಕಾರಿ ತಿರುವಿನಿಂದಾಗಿ ಬೈಕ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು. ಬೈಕನಲ್ಲಿದ್ದ ಮೂವರಲ್ಲಿ ಇಬ್ಬರ ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವ್ಯಕ್ತಿ ಕೃಷ್ಣ ಮಂಜುನಾಥ ನಾಯ್ಕ (60) ಬೆಂಗ್ರೆ ಪಂಚಾಯತನ ಸಣಬಾವಿ ನಿವಾಸಿಯಾಗಿದ್ದು ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು 25 ವರ್ಷದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿದ್ದರು ಹಾಗೂ ಸಣ್ಣಬಾವಿ ಬೆಂಗ್ರೆ ಪಂಚಾಯತ ಮಾಜಿ ಉಪಾಧ್ಯಕ್ಷರಾಗಿ ಕೂಡ ಕೆಲಸ ನಿರ್ವಹಿಸಿದ್ದರು. ಇನ್ನೋರ್ವ ಮೃತ ವ್ಯಕ್ತಿ ಗಣೇಶ್ ನಾರಾಯಣ ನಾಯ್ಕ (40) ಹಾಗ ಕೃಷ್ಣ ಬೈರ ನಾಯ್ಕ (35) ಗಂಭೀರವಾಗಿ ಗಾಯಕೊಂಡಿದ್ದಾರೆಂದು ತಿಳಿದು ಬಂದಿದ್ದೆ ಮೂವರು ಬೈಕ ಸವಾರರು ಬಸ್ತಿಯಲ್ಲಿನ ಮದುವೆಯ ಬೀಗರ ಊಟ ಮುಗಿಸಿಕೊಂಡು ಬಸ್ತಿಯಿಂದ ಸಣಬಾವಿ ಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಭಟ್ಕಳದ ಮುಂಡಳ್ಳಿಯ ಇನ್ನೊಂದು ಮದುವೆಯ ಬೀಗರ ಊಟಕ್ಕೆ ಜನರನ್ನು ಬಿಟ್ಟು ಮುರುಡೇಶ್ವರದ ಕಡೆಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಮಾಡಿದ ಅಪಾಯಕಾರಿ ತಿರುವಿನಿಂದಾಗಿ ಮುಖಾಮುಖಿ ಡಿಕ್ಕಿ ಸಂಬಸಿದ್ದು. ಇಬ್ಬರ ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಲಕ್ಷಣ ಜಟ್ಟ ನಾಯ್ಕ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.