ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

Source: S O News service | By V. D. Bhatkal | Published on 12th December 2020, 8:25 PM | Coastal News | Special Report |

ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ಹಿರಿಮೆಗೆ ಪಾತ್ರವಾಗಿದೆ. ಇಲ್ಲಿ ಗ್ರಾಮ ಪಂಚಾಯತ ಚುನಾವಣೆ ಎಂದರೆ ಅಕ್ಷರಶಃ ಎರಡು ಕುಟುಂಬದವರ ನಡುವಿನ ರಾಜಕೀಯ ಕಾದಾಟ! 

2011ರ ಜನಗಣತಿಯ ಪ್ರಕಾರ ಶಿರಾಲಿಯಲ್ಲಿ 6930 ಗಂಡಸರು ಹಾಗೂ 6969 ಹೆಂಗಡಸರು ಸೇರಿದಂತೆ ಒಟ್ಟೂ 13899 ಜನಸಂಖ್ಯೆ ಇದ್ದು, ಕೃಷಿ, ಕೂಲಿ, ಮೀನುಗಾರಿಕೆ, ವ್ಯಾಪಾರ ಈ ಭಾಗದ ಜನರ ಪ್ರಮುಖ ಉದ್ಯೋಗವಾಗಿದೆ. ನಾವು ಶಿರಾಲಿ ಗ್ರಾಮ ಪಂಚಾಯತ ಪ್ರದೇಶವನ್ನು ಸುತ್ತಿ ಬಂದರೆ ಧಾರ್ಮಿಕವಾಗಿಯೂ ಶ್ರೀಮಂತ ಪ್ರದೇಶವಾಗಿರುವುದು ಗೋಚರಿಸುತ್ತದೆ. ರಾಮಾಯಣದ ಕಥೆ ಹೇಳುವ ಪಂಚವಟಿ ಶಿರಾಲಿ ವ್ಯಾಪ್ತಿಯಲ್ಲಿದೆ. ಇತಿಹಾಸ ಪ್ರಸಿದ್ಧ ಶಂಭುಲಿಂಗೇಶ್ವರ ದೇವಸ್ಥಾನ ಇಲ್ಲಿಯೇ ಇದೆ. ಒಂದು ಕಾಲದಲ್ಲಿ ಇದು ಬ್ರಾಹ್ಮಣರ ಅಗ್ರಹಾರ ಎಂದೇ ಪ್ರಚಲಿತದಲ್ಲಿತ್ತು. ಶಂಕರಾಚಾರ್ಯರ ಶಿಷ್ಯ ಹಸ್ತಕಲಾಮಲಕ ಇಲ್ಲಿ ಬಂದು ಹೋಗಿರುವ ಬಗ್ಗೆ ಪ್ರತೀತಿ ಇದೆ. ಪೂರ್ವದಲ್ಲಿ ಪ್ರಸಿದ್ಧ ಚಿತ್ರಾಪುರ ಮಠ, ಉತ್ತರದಲ್ಲಿ ಕೋಟೆ ಶ್ರೀ ಹನುಮಂತ, ಪಶ್ಚಿಮದಲ್ಲಿ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ, ದಕ್ಷಿಣದಲ್ಲಿ ವೆಂಕಟಾಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಂಚಿನ ಶ್ರೀ ದುರ್ಗಾಪರಮೇಶ್ವರಿ, ಬೆದ್ರೊಳ್ಳಿ ಮಹಾಸತಿ, ಶಿರಾಲಿ ಕೇಂದ್ರ ಭಾಗದಲ್ಲಿ ಜಿಎಸ್‍ಬಿ ಸಮಾಜದ ಮಹಾಮ್ಮಾಯಿ ಮಹಾಗಣಪತಿ, ಶ್ರೀ ಮಾರುತಿ, ಹಾದಿಮಾಸ್ತಿ ದೇವಸ್ಥಾನಗಳಿದ್ದು, ಇಲ್ಲಿನ ಧಾರ್ಮಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಸಣಬಾವಿಯಲ್ಲಿ ಕ್ರಿಶ್ಚಿಯನ್ನರ ಚರ್ಚ ಇದ್ದರೆ, ತಟ್ಟಿಹಕ್ಕಲ್‍ನಲ್ಲಿ ಮುಸ್ಲೀಮರ ಮಸೀದಿಗಳೂ ಇವೆ.

2 ಕುಟುಂಬದ ನಡುವಿನ ಕಾಳಗ:
 ರಾಜಕೀಯ ವಿಷಯಕ್ಕೆ ಬಂದರೆ ಶಾಸಕ ಸುನಿಲ್ ನಾಯ್ಕ ಅವರ ಮನೆ ಶಿರಾಲಿ ಪೇಟೆಯ ಸನಿಹದಲ್ಲಿಯೇ ಇದೆ. ತಾಲೂಕು ಪಂಚಾಯತ ಅಧ್ಯಕ್ಷರಾಗಿದ್ದ ಕೆ.ಎನ್.ನಾಯ್ಕ ಸಹ ಇದೇ ಶಿರಾಲಿ ಚಿತ್ರಾಪುರದವರು. ಪಂಚಾಯತ ಅಧ್ಯಕ್ಷರಾಗಿ ಪಂಚಾಯತ ಆಡಳಿತದ ಮೇಲೆ ಹಿಡಿತ ಸಾಧಿಸಿದವರು. ಅವರದ್ದೇ ಸಹೋದರ ವೆಂಕಟೇಶ ನಾಯ್ಕ ಪಂಚಾಯತದ ನಿಕಟ ಪೂರ್ವ ಅಧ್ಯಕ್ಷರಾಗಿದ್ದಾರೆ. ಶಾಸಕ ಸುನಿಲ್ ನಾಯ್ಕರ ತಂದೆ ಬಿ.ಕೆ.ನಾಯ್ಕ ಸಹ ಈ ಹಿಂದೆ 2 ಬಾರಿ ಪಂಚಾಯತ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಹಾಗೆ ನೋಡಿದರೆ ಶಿರಾಲಿ ಪಂಚಾಯತ ಅಧಿಕಾರಕ್ಕಾಗಿ ಕೆ.ಎನ್.ನಾಯ್ಕ ಹಾಗೂ ಬಿ.ಕೆ.ನಾಯ್ಕ (ಈಗ ಶಾಸಕ ಸುನಿಲ್ ನಾಯ್ಕ) ಕುಟುಂಬದ ರಾಜಕೀಯ ಸೆಣಸಾಟ ಇಂದು ನಿನ್ನೆಯದ್ದಲ್ಲ. ಅಪ್ಪಿತಪ್ಪಿ ಮೀಸಲಾತಿಯಿಂದಾಗಿ ಯಾರೇ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಏರಿದರೂ ಕುರ್ಚಿಯ ಹಿಂದಿನ ಗಾಡ್‍ಫಾದರ್‍ಗಳು ಇದೇ ಎರಡು ಕುಟುಂಬದವರು ಎನ್ನುವುದು ಶಿರಾಲಿಯ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತು. ನೆಪ ಮಾತ್ರಕ್ಕಷ್ಟೇ ಪಕ್ಷಪಂಗಡದ ಧಿರಿಸುಗಳು! ಈಗಲೂ ಜಿಲ್ಲೆಯ ದೊಡ್ಡ ಪಂಚಾಯತ ಎಂದೇ ಪ್ರಸಿದ್ಧಿ ಪಡೆದಿರುವ ಶಿರಾಲಿ ಪಂಚಾಯತನಲ್ಲಿ ಒಂದು ಕಡೆ ಮಾಜಿ ಶಾಸಕ ಮಂಕಾಳು ನಾಮ ಬಲದೊಂದಿಗೆ ಕೆ.ಎನ್.ನಾಯ್ಕ ಸಹೋದರ ವೆಂಕಟೇಶ ನಾಯ್ಕ ಬಿಲ್ಲು ಬಾಣ ಧರಿಸಿ ಹೊರಟರೆ, ಇನ್ನೊಂದು ಕಡೆ ಬಿ.ಕೆ.ನಾಯ್ಕರ ಪುತ್ರ ಶಾಸಕ ಸುನಿಲ್ ನಾಯ್ಕ, ಅವರ ಸಹೋದರ ಸಿದ್ಧಾರ್ಥ ನಿಂತು ಕತ್ತಿ ಝಳಪಿಸುತ್ತಲೇ ಇದ್ದಾರೆ. ಫಲಿತಾಂಶದ ಲೆಕ್ಕ ಅಷ್ಟು ಸುಲಭವಾಗಿಲ್ಲ. 

ಪಂಚಾಯತ ಒಡೆಯುವ ಕೂಗಿಗೆ ಬಲವಿಲ್ಲ:
ಶಿರಾಲಿ ಗ್ರಾಮ ಪಂಚಾಯತ ದೊಡ್ಡ ಪಂಚಾಯತ ಆಗಿರುವುದರಿಂದ ಇದನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ 2005ರ ಹೊತ್ತಿಗೇ ಚರ್ಚೆ ಆರಂಭವಾಗಿತ್ತು. ಆದರೆ ಕೆ.ಎನ್.ನಾಯ್ಕ ಮತ್ತಿತತರು ಮುಂದೆ ನಿಂತು ವಿರೋಧ ವ್ಯಕ್ತಪಡಿಸಿದ್ದರು. ನಂತರವೂ ಚರ್ಚೆ ಮುಂದುವರೆದುಕೊಂಡೇ ಇದೆ. ಶಿರಾಲಿಯಲ್ಲಿ ಬಡವರು ಹೆಚ್ಚಾಗಿರುವುದರಿಂದ ಮನೆ, ಅಂಗಡಿ ಕರಗಳು ಹೆಚ್ಚಳವಾಗಿ ಕಷ್ಟವಾಗಬಹುದು ಎಂಬ ಭೀತಿಯೇ ಇದಕ್ಕೆ ಕಾರಣವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಪಂಚಾಯತ ಹಿರಿಯ ಸದಸ್ಯ ಎ.ಬಿ.ಡಿ. ಕೊಸ್ತಾ. ಸದ್ಯ ಪಂಚಾಯತ ಸದಸ್ಯರ ಸಂಖ್ಯೆ 35 ಆಗಿದೆ. ಈಗ ವಿಭಜನೆ ಮಾಡಬಹುದಲ್ಲ ಎಂದು ಕೇಳಿದರೆ, ಮತ್ತೆ 2 ಅವಧಿ ಕಳೆಯಲಿ, ಮುಂದೆ ನೋಡಿದರಾಯಿತು ಎಂದು ಮುಗುಮ್ಮಾಗಿ ಉತ್ತರಿಸುತ್ತಾರೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...