ಭಟ್ಕಳ : ಚನ್ನಪಟ್ಟಣದ ಶ್ರೀ ಹನುಮಂತ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು.
ಕಳೆ ವರ್ಷ ಕೋವಿಡ್ 19 ಅಬ್ಬರದಿಂದ ಮುಂದೂಡಿದ್ದ ಜಾತ್ರೆ ಈ ಬಾರೀ ರಥಸಪ್ತಮಿಯಂದು ಆರಂಭಗೊಂಡಿತ್ತು. ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.
ರಥೋತ್ಸವ ಆರಂಭಕ್ಕೂ ಮುನ್ನ ಸಂಪ್ರದಾಯಂತೆ ಚಿರ್ಕಿನ್ ಶಾಬಾಂದ್ರಿ ಕುಟುಂಬದವರಿಗೆ ವೀಳ್ಯ ನೀಡುವ ಮೂಲಕ ಜಾತ್ರೆಗೆ ಆಹ್ವಾನಿಸಲಾಯಿತು. ಸಂಜೆ ದೇವಾಲಯದ ಎದುರು ದೇವರಿಗೆ ಈಡುಗಾಯಿ ಒಡೆಯುವ ಮೂಲಕ ಭಕ್ತರು ರಥವನ್ನ ಎಳೆದು ಪುನೀತರಾದರು.
ಹುಲಿ ವೇಷ, ಭಜನೆ, ಡೊಳ್ಳು ವಾದ್ಯ ಜಾತ್ರೆಯಲ್ಲಿ ಗಮನ ಸೆಳೆಯಿತು. ಸುಮಾರು 20ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.