ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯ ಸುಲ್ತಾನ್ ಸ್ಟ್ರೀಟ್ನಲ್ಲಿ ಜನಸ್ಪಂದನಾ ಕಾರ್ಯಕ್ರಮವು ಮುಖ್ಯಾಧಿಕಾರಿ ದೇವರಾಜ್ ಉಪಸ್ಥಿತಿಯಲ್ಲಿ ನಡೆಯಿತು.
ಸುಲ್ತಾನ್ ಸ್ಟ್ರೀಟ್ ಭಾಗದ ಚರಂಡಿ, ರಸ್ತೆ ಸಮಸ್ಯೆಯ ಬಗ್ಗೆ ಜನರು ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪುರಸಭಾ ಅಭಿಯಂತರ ಉಮೇಶ ಮಡಿವಾಳ, ಕಂದಾಯ ಅಧಿಕಾರಿ ದಯಾನಂದ ದೇಸಾಯಿ, ಪುರಸಭಾ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ವೇಣುಗೋಪಾಲ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.