ಭಟ್ಕಳ: ತಾಲೂಕಿನ ಹಲವು ದೇವಸ್ಥಾನಗಳಿಗೆ ಅಬಿವೃದ್ದಿಗೆ ಧಾರ್ಮಿಕ ದತ್ತಿನಿಧಿಯಿಂದ ನಮ್ಮ ಸರಕಾರದಿಂದ
ಹಣ ಮಂಜೂರಾಗಿದ್ದು ಇದರ ಸದ್ಭಳಕೆಯಾಗಬೆಕಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ರವಿವಾರದಂದು ಬೆಳಿಗ್ಗೆ ನಗರದ ಆಸರಕೇರಿಯ ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಬಿವೃದ್ದಿಗೆ ಸರಕಾರದಿಂದ ಮಂಜೂರಾದ ಕಾಮಗಾರಿಗೆ ದೇವಸ್ಥಾನದ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಈಗಾಗಲೇ ಗುರುಮಠಕ್ಕೆ ಸರಕಾರದಿಂದ 20 ಲಕ್ಷ ರೂ ಮಂಜೂರಿ ದೊರೆತಿದ್ದು ಇನ್ನು ಮುಂದಿನ ಹಂತದಲ್ಲಿ ಇ ದೇವಸ್ಥಾನದ ಯಾತ್ರಿನಿವಾಸ ವಸತಿಗೃಹಕ್ಕೆ ಹಣ ಮಂಜೂರಿಗೆ ಶಿಫಾರಸ್ಸು ಮಾಡಲಾಗಿದ್ದು ತಾಲೂಕಿನ ಎಲ್ಲಾ ದೇವಸ್ಥಾನಗಳಿಗೆ ನಮ್ಮ ಸರಕಾರದಿಂದ ಹಣ ಮಂಜೂರಾತಿಗಾಗಿ ಪ್ರಯತ್ನಿಸಲಾಗುವುದು ಎಂದರು.
ದೇವಸ್ತಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್. ನಾಯ್ಕ, ಗೌರವಾಧ್ಯಕ್ಷ ಡಿ.ಬಿ.ನಾಯ್ಕ ಮಾತನಾಡಿ ತಾಲೂಕಿನಲ್ಲಿ ಶಾಸಕರು ಅನೇಕ ಅಬಿವೃದ್ದ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ನಮ್ಮ ದೇವಸ್ಥಾನಗಳಿಗೆ ಹಣ ಮಂಜೂರಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಮೋಹನ ನಾಯ್ಕ, ಶ್ರೀಧರ ನಾಯ್ಕ, ರಾಜೇಶ ನಾಯ್ಕ, ಎಸ್.ಎಂ.ನಾಯ್ಕ, ಗಣಪತಿ ನಾಯ್ಕ, ವಿನಾಯಕ ನಾಯ್ಕ ಸೇರಿದಂತೆ ನೂತನ ಕಮಿಟಿಯ ಸದಸ್ಯರು ಹಾಜರಿದ್ದರು.