ಜು.೩೧ ಭಟ್ಕಳದ ‘ಮರಹಬಾ’ ದಲ್ಲಿ ಮಹೆಫಿಲ್-ಎ-ಯಾರಾನ್ ಉರ್ದು ಮುಷಾಯಿರಾ

Source: sonews | By Staff Correspondent | Published on 30th July 2017, 6:27 PM | Coastal News | State News | Gulf News | Don't Miss |

ಭಟ್ಕಳ: ಅಂತರಾಷ್ಟ್ರೀಯ ಮುಷಾಯಿರಾ ನಿರೂಪಕ ಭಟ್ಕಳ ಮೂಲದ ಅನಿವಾಸಿ ಭಾರತೀಯ ರಹಮತುಲ್ಲಾ ರಾಹಿ ಅವರ ನಿರೂಪಣೆಯಲ್ಲಿ ಜು.೩೧ ರಂದು ಇಲ್ಲಿನ ನವಾಯತ್ ಕಾಲೋನಿಯ ‘ಮರಹಬಾ’ ದಲ್ಲಿ ರಾತ್ರಿ ೯.೦೦ಗಂಟೆಗೆ ‘ಮಹೆಫಿಲ್-ಎ-ಯಾರಾನ್’ ಉರ್ದು ಮುಷಾಯಿರಾ ನಡೆಯಲಿದೆ. 
ಅಂತರಾಷ್ಟ್ರೀಯ ಖ್ಯಾತಿಯ ಕವಿಗಳಾದ ಇಮ್ರಾನ್ ಪ್ರತಾಪಗಡಿ, ಬಾಲಕವಿ ಸುಫಿಯಾನ್ ಪ್ರತಾಪಗಡಿ, ಹಾಸ್ಯ ಮತ್ತು ವ್ಯಂಗ್ಯ ಕವಿ ಹಾಗೂ ಬಾಲಿವುಡ್ ಹಾಸ್ಯ ನಟ ಎಹಸಾನ್ ಕುರೇಷಿ ಮುಷಾಯಿರದಲ್ಲಿ ಭಾಗವಹಿಸುತ್ತಿದ್ದಾರೆ. 
ಉದ್ಯಮಿ ಅತಿಖುರ್ರಹ್ಮಾನ್ ಮುನಿರಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ತನ್ನ ಪುತ್ರನ ವಿವಾಹ ಸಮಾರಂಭವನ್ನು ಸಾಹಿತ್ಯ ಸೇವೆಗಾಗಿ ಬಳಸಿಕೊಂಡಿದ್ದು ಇದೊಂದು ದಾಖಲೆಯ ವಿಷಯವಾಗಲಿದೆ ಎಂದ ಅವರು, ಭಟ್ಕಳದ ಜನತೆಗೆ ಇದು ಚಿರಸ್ಮರಣೀಯವಾಗಲಿದೆ ಎಂದರು. ಮುಷಾಯಿರಾ ದಲ್ಲಿ ಅತಿಥಿ ಕವಿಗಳೊಂದಿಗೆ ಸ್ಥಳಿಯ ಕವಿಗಳಾದ ಸೈಯ್ಯದ್ ಸಮಿಯುಲ ಬರ್ಮಾವರ್ ಮತ್ತು ರಿಝ್ವಾನ್ ಸುಕ್ರಿ ತಮ್ಮ ಶಾಯಿರಿಗಳ ಮೂಲಕ ಜನರನ್ನು ರಂಜಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭಟ್ಕಳದ ಸಾಹಿತ್ಯಪ್ರೇಮಿಗಳು ಸೋಮವಾರ ರಾತ್ರಿ ಮುಷಾಯಿರಾ ದಲ್ಲಿ ಭಾಗವಹಿಸುವುದರ ಮೂಲಕ ಮಹೆಫಿಲ್-ಎ-ಯಾರಾನ್ ಸಂಜೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. 
ಮುಷಾಯಿರಾ ವನ್ನು ಸಾಹಿಲ್ ಆನ್ ಲೈನ್ ನಲ್ಲಿ ನೇರ ಪ್ರಸಾರವಾಗಲಿದ್ದು ಆಸಕ್ತರು  ಭೇಟಿ ನೀಡಿ ಇದರ ಚಂದದಾರರಾಗಬಹುದಾಗಿದೆ.  
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...