ಭಟ್ಕಳ: ಇಲ್ಲಿನ ಮಾವಳ್ಳಿ1ರ ಹೋಬಳಿ ಮಟ್ಟದ ಕಂದಾಯ ಅದಾಲತ್ ಬುಧವಾರರದಂದು ಇಲ್ಲಿನ ಪಂಚಾಯತ ಸಭಾಭವನ ದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಭಟ್ಕಳ ಸಹಾಯಕ ಆಯುಕ್ತ ಭರತ್ ಮಾತನಾಡಿದ ಸರಕಾರದಿಂದ ಪಹಣಿ ಪತ್ರದಲ್ಲಿ ಏನಾದರೂ ದೋಪಷವಿದ್ದಲ್ಲಿ ಆದಾಲತನಲ್ಲಿ ಪಾಲ್ಗೊಂಡ ಅರ್ಹ ದಾಖಲಾತಿ ನೀಡಿದ್ದಲ್ಲಿ ಸರಿಪಡಿಸಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಎಸ್. ರವಿಚಂದ್ರನ್, ಶಿರಸ್ತೇದಾರ ಸುರೇಶ್ ಶೆಳಕೆ, ಕಂದಾಯ ನಿರೀಕ್ಷಕ ಶ್ರೀನಿವಾಸ, ಮಾವಳ್ಳಿ ಹೋಬಳಿಯ ಎಲ್ಲಾ ಗ್ರಾಮ ಲೆಕ್ಕಿಗರು ಹಾಗೂ ಗ್ರಾಮಸಹಾಯಕರು ಉಪಸ್ಥಿತರಿದ್ದರು.