ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹಾಗೂ ಅವರ ಬೆಂಬಲಿಗರು ಮಾಲಾಧಾರಿಗಳಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.
ಶಾಸಕರೂ ಸೇರಿದಂತೆ ಒಟ್ಟೂ 40 ಜನರು ಕಳೆದ ಜ.15 ರಂದು ರೈಲಿನಲ್ಲಿ ಶಬರಿಮಲೆಗೆ ಪ್ರಯಾಣ ಬೆಳೆಸಿದರು. ಅಯ್ಯಪ್ಪ ಸ್ವಾಮಿಯ ದರ್ಶನದ ನಂತರ ಜ.17ರಂದು ಕೇರಳದಿಂದ ಹೊರಟಿದ್ದು, ಮಂಗಳವಾರ ಭಟ್ಕಳವನ್ನು ತಲುಪಲಿದ್ದಾರೆ.