ಭಟ್ಕಳ : ಗಾರ್ಮೆಂಟ್ ವ್ಯಾಪಾರಸ್ಥರಿಗೆ ಕೋವಿಡ್ ನಿಂದ ನಷ್ಟ. ಸಹಾಯ ಮಾಡಲು ಸರ್ಕಾರಕ್ಕೆ ಮನವಿ.

Source: SO News | By Laxmi Tanaya | Published on 15th June 2021, 11:20 PM | Coastal News | Don't Miss |

ಭಟ್ಕಳ : ಕೋವಿಡ್ ಲಾಕ್ ಡೌನಿಂದ ಬಟ್ಟೆ ವ್ಯಾಪಾರಿಗಳು ತುಂಬಾ ನಷ್ಟ ಅನುಭವಿಸಿದ್ದು ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕೆಂದು ಭಟ್ಕಳದ  ಗಾರ್ಮೆಂಟ್ ಮರ್ಚಂಟ್ ಅಸೋಸಿಯೇಷನ್ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಗೆ ಮನವಿ ‌ನೀಡಿ ಆಗ್ರಹಿಸಿದೆ.

ಕಳೆದ ಕೆಲ ತಿಂಗಳಿಂದ ಲಾಕ್ ಡೌನ್ ಸಂಕಷ್ಟದಿಂದ ಅಂಗಡಿಯ ಬಾಡಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲ ಕಟ್ಟಲಿಕ್ಕೆ ಕೂಡ ತೊಂದರೆಯಾಗಿದೆ. ಬ್ಯಾಂಕುಗಳಿಗೆ ಸಾಲದ  ಇಎಂಐ ತುಂಬಲಿಕ್ಕೆ ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

 ರಂಜಾನ್ ಸಂದರ್ಭದಲ್ಲಿ ಭಟ್ಕಳದಲ್ಲಿ  ತಮಗೆ ಉತ್ತಮ ವ್ಯಾಪಾರ ಅಗುತಿತ್ತು. ಆದರೆ ಕರೋನಾ ರಂಜಾನ್ ವ್ಯಾಪಾರವನ್ನ ಕಸಿದಿರುವುದರಿಂದ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ  ಸಂಬಳ ನೀಡಲು ಸಾಧ್ಯವಾಗಿಲ್ಲ. ಅಲ್ಲದೇ  ಅಂಗಡಿಗಳಿಗೆ ಈ ಹಿಂದೆ  ವ್ಯಾಪಾರಕ್ಕಾಗಿ ಬಟ್ಟೆ ಖರೀದಿಸಲಾಗಿದ್ದು, ಅವರಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ  ಸರ್ಕಾರದಿಂದ ನಮಗೆ ಸಹಾಯ ಬೇಕು ಎಂದು ವ್ಯಾಪಾರಸ್ಥರು ಯಾಚಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...