ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಈದ್ಗಾ ಕಮಿಟಿ ಮನವಿ
ಭಟ್ಕಳ: ಜು.31ರಂದು ಭಟ್ಕಳ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಇಸ್ಲಾಮ್ ಧರ್ಮದ ಮಹತ್ವದ ಹಬ್ಬವಾಗಿರುವ ಈದುಲ್ ಅಝ್ಹಾ ದ ವಿಶೇಷ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ನೆರವೇರಿಸದೆ ವಿವಿಧ ಜಾಮಿಯಾ ಮಸೀದಿಗಳಲ್ಲಿ ನೆರವೇರಿಸಲಾಗುವುದು ಎಂದು ಭಟ್ಕಳ ಇದ್ಗಾ ಕಮಿಟಿ ಪ್ರಕರಣೆಯಲ್ಲಿ ತಿಳಿಸಿದೆ.
ಜಾಮಿಯ ಮಸೀದಿ (ಚಿನ್ನದ ಪಳ್ಳಿ), ಖಲಿಫಾ ಜಾಮಿಯಾ ಮಸೀದಿ (ಗುರುಗಳ ಪಳ್ಳಿ), ತಂಝೀಮ್ ಜುಮಾ ಮಸ್ಜಿದ್(ಮಿಲ್ಲಿಯಾ ಮಸ್ಜಿದ್) ಮಖ್ದೂಮಿಯಾ ಜುಮಾ ಮಸೀದಿ, ಬಿಲಾಲ್ ಜುಮಾ ಮಸೀದಿಗಳಲ್ಲಿ ಬೆಳಿಗ್ಗೆ 7ಗಂಟೆಗೆ ಹಾಗೂ ಮದೀನಾ ಮಸೀದಿ, ನೂರ್ ಮಸೀದಿ, ಅಬೂಬಕರ್ ಮಸೀದಿ, ಹಮ್ಝಾ ಮಸೀದಿ, ಬದ್ರಿಯಾ ಮಸೀದಿ, ಆಹ್ಮದ್ ಸಯೀದ್ ಮಸೀದಿ, ಇಮಾಮ್ ಬುಖಾರಿ ಮಸೀದಿಗಳಲ್ಲಿ ಬೆ.7.15ನಿ. ಕ್ಕೆ ನಮಾಝ್ ನಿರ್ವಹಿಸಲಾಗುವುದು.
ಕೊರೋನಾ ಮಹಾಮಾರಿಯ ಸಂಕಷ್ಟದಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಟ್ಟುನಿಟ್ಟಿನ ಕ್ರಮಗಳನ್ನು ಜರಗಿಸಿದ್ದು ಆ ಎಲ್ಲ ನಿಯಮಗಳನ್ನು ಪಾಲಿಸುತ್ತ, ಮಾಸ್ಕ್ ಧರಿಸಿ ಈದ್ ನಮಾಝ್ ನಿರ್ವಹಿಸುವಂತೆ ಈದ್ಗಾ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿ ಸಾದಿಕ್ ಅಸರಮತ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.