ಭಟ್ಕಳ: ಮಂಗಳವಾರದಿಂದ ಚುರುಕು ಪಡೆದುಕೊಂಡಿರುವ ಮುಂಗಾರು ಮಳೆಯು ಬುಧವಾರವೂ ಮುಂದುವರೆದಿದ್ದು ತಾಲೂಕಿನಾದ್ಯಂತ ಹಲವು ಅವಾಂತರಗಳಿಗೆ ಕಾರಣವಾಯಿತು.
ಎರಡು ದಿನಗಳಿಂದ ಸುರಿಯುತ್ತಿರು ಮಳೆಗಾಳಿಗೆ ತಾಲೂಕಿನಾದ್ಯಂತ ಹೆಸ್ಕಾಂ ಇಲಾಖೆಯ 8 ವಿದ್ಯುತ್ ಕಂಬಗಳು ಧರೆಗುಳಿದ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಕೆ ಕಟಗೇರಿ ಎಂಬಲ್ಲಿ 2 ವಿದ್ಯುತ್ ಕಂಬಗಳು, ಪಂಚಾಯತ್ ಕಚೇರಿ ಬಳಿ 1 ಕಂಬ, ಶಿರಾಲಿಯಲ್ಲಿ 3, ಬೈಲೂರು ಪಂಚಾಯತ್ ವ್ಯಾಪ್ತಿಯ ನೀರಗದ್ದೆ ಎಂಬಲ್ಲಿ 2 ವಿದ್ಯುತ್ ಕಂಬಗಳು ಧರೆಗುರುಳಿದ್ದು ಹೆಸ್ಕಾಂ ಇಲಾಖೆಗೆ 64ಸಾವಿರ ರೂ ನಷ್ಟವಾಗಿದೆ ಎಂದು ಸಹಾಯಕ ಅಭಿಯಂತರರು ಮಾಹಿತಿ ನೀಡಿದ್ದಾರೆ.