ಬೆಳ್ತಂಗಡಿ, ಜ ೧೨: ತಾಲೂಕು ನಡ ಗ್ರಾಮದ ಅಂತ್ರಾಯಿಪಲ್ಕೆ ಹೊಳೆಯಲ್ಲಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ರಹೀಮ್(೩೦),ಈತನ ಹೆಂಡತಿ ರುಬೀನಾ(೨೫), ಯಾಸ್ಮಿನ್(೨೩), ಸುಬಾನ್(೧೫)ಎಂಬವರುಗಳು ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ಇವರು ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆ ನಿವಾಸಿಗಳು. ಈ ದಿನ ಬೆಳಿಗ್ಗೆ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಹೊಳೆಗೆ ಸ್ನಾನ ಮಾಡುವ ಬಗ್ಗೆ ಇಳಿದಿದ್ದರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥ ಗೊಂಡವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.