ಮುಂಡಗೋಡ: ಭಾರತಿಯ ಕೃಷಿಕ ಸಮಾಜ ತಾಲೂಕ ಅಧ್ಯಕ್ಷರಾಗಿ ಪತ್ರಕರ್ತ ಬಸವರಾಜ ಪಾಟೀಲ ನೇಮಕ
ಮುಂಡಗೋಡ: ಭಾರತೀಯ ಕೃಷಿಕ ಸಮಾಜ (ಸಂಯುಕ್ತ), ರೈತ ಸಂಘಟನೆಯ ತಾಲೂಕ ಅಧ್ಯಕ್ಷರನ್ನಾಗಿ ಮುಂಡಗೋಡ ತಾಲೂಕಿನ ಕೊಪ್ಪ(ಇಂದೂರ) ಗ್ರಾಮದ ಪತ್ರಕರ್ತ ಬಸವರಾಜಗೌಡ್ರು ವೀರನಗೌಡ್ರು ಪಾಟೀಲ ರನ್ನು ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.
ರೈತ ಹಿತಚಿಂತಕರಾದ ತಾವು ರೈತಪರ ಹೋರಾಟ, ರೈತರ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಹಾಗೂ ರಾಜ್ಯ ಜಿಲ್ಲೆಯಲ್ಲಿ ರೈತ ಸಂಘಟನೆಯ ಬಲವರ್ಧನೆಗೆ ಕಾರ್ಯಪ್ರವೃತರಾಗುವಂತೆ ನೀಡಿದ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.