ಬೆಂಗಳೂರು: ಬೆಂಗಳೂರಿನ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಆಸುಪಾಸಿನಲ್ಲಿರುವ ಪ್ರದೇಶಗಳ ನಿವಾಸಿಗಳು ಈ ಕೆರೆಗಳನ್ನು ಆವರಿಸಿದ ಬೆಳ್ಳಗಿನ ನೊರೆ ಮತ್ತು ಇದರಿಂದ ಹೊರಸೂಸುತ್ತಿರುವ ವಾಸನೆ ಮತ್ತು ಮಾಲಿನ್ಯ ದ ಕುರಿತು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಇತ್ತೀಚಿನ ವರ್ದಾ ಚಂಡಮಾರುತದ ಅಬ್ಬರದ ಬಳಿಕ ಈ ವಿದ್ಯಮಾನ ಕಂಡುಬಂದಿದೆ.
ಬೇಸಿಗೆಯಲ್ಲಿ ಈ ಕೆರೆಗಳು ಒಣಗುವ ಕಾರಣ ಈ ವಿಷ ಇನ್ನಷ್ಟು ಪ್ರಬಲಗೊಳ್ಳಬಹುದು ಎಂದು ನಾಗರಿಕರು ಅನುಮಾನಿಸಿದ್ದಾರೆ.
"ಸರೋವರ ದುರ್ವಾಸನೆ ಸುಸುತ್ತಿದ್ದು ರೋಗಗಳಿಗೆ ಕಾರಣವಾಗುತ್ತದೆ. ನಾಗರಿಕ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಇನ್ನೂ ಮುಂದೆ ಬಂದಿಲ್ಲ, ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ಕೆಲವೊಮ್ಮೆ ಸರೋವರಗಳು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಕೆರೆಯಲ್ಲಿ ಮಲಿನ ನೀರನ್ನು ಸಂಸ್ಕರಿಸದೇ ಬಿಟ್ಟ ಕಾರಣ ಕೊಳೆ ಹಾಗೇ ಉಳಿದು ಬಿಡುತ್ತದೆ. ಚಂಡಮಾರುತದ ಕಾರಣ ನೀರು ತುಂಬಿದ್ದರಿಂದ ಈ ಕೊಳೆನೀರು ಉಕ್ಕಿ ರಸ್ತೆಯ ಮೇಲೆಲ್ಲಾ ಹರಿದಿರುವುದು ಕಂಡುಬಂದಿದೆ.
ರಸ್ತೆಯ ಮೇಲೆಲ್ಲಾ ಚೆಲ್ಲಾಡಿರುವ ಈ ಸೋಪುಭರಿತ ನೀರು ವಾಹನಗಳಿಗೆ ಅತಿ ಅಪಾಯಕಾರಿಯಾಗಿದ್ದು ಜಾರಿ ಬೀಳುವ ಸಾಧ್ಯತೆಯನ್ನು ಅಪಾರವಾಗಿ ಹೆಚ್ಚಿಸಿದೆ. ಈ ಅಪಾಯವನ್ನು ಮನಗಂಡ ಬೆಂಗಳೂರು ನೀರು ಸರಬರಾಜು ಇಲಾಖೆ ಈ ನೊರೆಯ ಮೇಲೆ ನೀರು ಚಿಮುಕಿಸಿ ಜಾರುವಿಕೆಯನ್ನು ತಡೆಗಟ್ಟುವ ಪ್ರಯತ್ನ ನಡೆಸಿದೆ.
'Whitefield Rising’ ಎಂಬ ಸಂಸ್ಥೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತಕ್ಷಣ ಸೂಕ್ತ ಪರಿಹಾರ ಒದಗಿಸಲು ಬಿಬಿಎಂಪಿ. Karnataka State Pollution Control Board (KSPCB), ಹಾಗೂ Karnataka Lake Conservation and Development Authority (KLCDA) ಸಂಸ್ಥೆಗಳಿಗೆ ದೂರು ಸಲ್ಲಿಸಿದೆ.