ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಆರಂಭ 

Source: so english | By Arshad Koppa | Published on 29th July 2017, 1:14 PM | State News | Editorial | Technology | Don't Miss |

ಬೆಂಗಳೂರು, ಜುಲೈ 28, 2017; ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್‍ನಲ್ಲಿ ಪರಿಣಿತ ವೃತಿಪರ ವೈದ್ಯರು, ತರಬೇತಿಯುಕ್ತ ಶುಶ್ರೂಷಕಿಯರನ್ನು ಒಳಗೊಂಡ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಅನ್ನು ಇಂದು ಆರಂಭಿಸಲಾಯಿತು.


ಈ ಕ್ಲಿನಿಕ್‍ನಲ್ಲಿ ಬಹುಹಂತದ ಚಿಕಿತ್ಸೆ ಒದಗಿಸುವ ವೈದ್ಯರತಂಡ ಅಂದರೆ ಹೆಡ್ ಅಂಡ್ ನೆಕ್ ಆಂಕೊ ಸರ್ಜನ್ಸ್, ಎಂಡೊಕ್ರಿನಾಲಿಜಿಸ್ಟ್, ರೇಡಿಯಾಲಾಜಿಸ್ಟ್, ಪ್ಯಾಥಾಲಾಜಿಸ್ಟ್, ನ್ಯೂಕ್ಲಿಯರ್ ಫಿಜಿಸಿಯನ್ ಇದ್ದು, ಅದೇ ದಿನದಲ್ಲಿ ಥೈರಾಯ್ಡ್ ಕ್ಯಾನ್ಸರ್‍ಗೆ ಚಿಕಿತ್ಸೆಯ್ನು ಒದಗಿಸಲಿದೆ. ಇದು, ಈ ಕೇಂದ್ರದ ವಿಶೇಷವೂ ಹೌದು. ಈ ತಪಾಸಣೆಯ ಕೆಲ ಪರೀಕ್ಷೆಗಳಲ್ಲಿ ಎಂಡೊಕ್ರಿಮಿನಾಲಜಿ ಕ್ಲಿನಿಕಲ್ ತಪಾಸಣೆ, ಸಮಾಲೋಚನೆ, ಥೈರಾಯ್ಡ್ ಕಾರ್ಯನಿರ್ವಹಣಾ ಪರೀಕ್ಷೆ (ರಕ್ತ ಪರೀಕ್ಷೆ),ಯುಸಿಜಿ ಇದೆ. ಕ್ಲಿನಿಕ್‍ನ ಸೇವೆಗಾಗಿ ಆಸಕ್ತರು 186-02080208 ಸಂಖ್ಯೆಗೆ ಕರೆ ಮಾಡಬಹುದು.
ಥೈರಾಯ್ಡ್ ಪರಿಸ್ಥಿತಿಗೆ ಚಿಕಿತ್ಸೆ ಲಭ್ಯವಿದ್ದರೂ ಅನೇಕರು ಕಡೆಗಣಿಸುತ್ತಾರೆ. ಹೈಪೋಥೈರಾಡ್ಡ್ ಮತ್ತು ಹೈಪೋ ಥೈರಾಡ್ಡಿಸಂ ಇದ್ದರೆ ಅದು ಥೈರಾಯ್ಡ್ ಕ್ಯಾನ್ಸರ್ ಸಾಧ್ಯತೆಗಳನ್ನು ಹೆಚ್ಚಿಸುವುದಿಲ್ಲ.  ಈ ಮೊದಲೇ ಇದ್ದ ಥೈರಾಯ್ಡ್   ಅಂದರೆ ಗೊಯಿಟರ್ ಅಥವಾ ಇನ್‍ಫ್ಲೇಮೇಷನ್‍ನಿಂದ ಥೈರಾಯ್ಡ್ ಕ್ಯಾನ್ಸರ್ ವ್ಯಾಪಿಸುವ ಸಾಧ್ಯತೆಗಳು ಇವೆ. 
ವಿಶೇಷ ಕ್ಲಿನಿಕ್‍ನ ಅಗತ್ಯವನ್ನು ಪ್ರತಿಪಾದಿಸಿದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್‍ನ ಆಂಕಾಲಜಿ ವಿಭಾಗದ ಮುಖ್ಯಸ್ಥ, ಆಂಕಾಲಜಿ ಮತ್ತು ಹಿರಿಯ ಕನ್ಸಲ್ಟಂಟ್ ಡಾ. ಮೋನಿ ಅಬ್ರಹ್ಮಾಂ ಕುರಿಯಕೊಸ್ ಅವರು, `ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ನಗರಗಳಲ್ಲಿ ಬೆಂಗಳೂರೂ ಒಂದು. ವಾಸ್ತವವಾಗಿ ತಲೆ ಮತ್ತು ಕ್ಯಾನ್ಸರ್ ಪ್ರಕರಣಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಪಿಬಿಸಿಆರ್ ಪ್ರಕಾರ (ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವರದಿ ಅನುಸಾರ) ಥೈರಾಯ್ಡ್‍ನ ಪ್ರಮಾಣ ಬಾಯಿ ಕ್ಯಾನ್ಸರ್‍ಗಳ ಪೈಕಿ ಶೇ 4ರಷ್ಟಿದೆ. ಈ ಹಿನ್ನಲೆಯಲ್ಲಿ ಇಂಥದೇ ಪ್ರಕರಣಗಳ ಚಿಕಿತ್ಸೆಗೆ ಕ್ಲಿನಿಕ್ ಆರಂಭಿಸ ಲಾಗಿದೆ. ಥೈರಾಯ್ಡ್ ಏರಿಳಿತಗಳಿಗೆ ಚಿಕಿತ್ಸೆ ಒದಗಿಸಲಿರುವ ಮೊದಲ ವಿಶೇಷ ಕ್ಲಿನಿಕ್ ಇದಾಗಿದೆ’ ಎಂದರು.
ಥೈರಾಯ್ಡ್ ಒಂದು ಪ್ರಮುಖ ಎಂಡೊಕ್ರೈನ್ ಗ್ಲ್ಯಾಡ್ ಆಗಿದ್ದು, ದೇಹದಲ್ಲಿ ಹಾರ್ಮೊನ್ ಉತ್ಪತ್ತಿ ಮಾಡಲಿದೆ. ಇದು, ದೇಹದಲ್ಲಿನ ಅನೇಕ ಮೆಟಾಬಾಲಿಕ್ ಚಟುವಟಿಕೆಗಳನ್ನು ನಿಯಂತ್ರಿಸಲಿದೆ. ಪ್ರಸ್ತುತ ಸೂಕ್ಷ್ಮ ಜೀವಿಶಾಸ್ತ್ರ ಮತ್ತು ಅನ್ವಯಿಕ ವಿಜ್ಞಾನ ಕುರಿತ ಅಂತರರಾಷ್ಟ್ರೀಯ ನಿಯತಕಾಲಿಕೆ ಅನುಸಾರ ವಿಶ್ವದಲ್ಲಿ 300 ಮಿಲಿಯನ್ ಜನರು ಇದರಿಂದ ಬಳಲುತ್ತಿದ್ದಾರೆ. ಇªರಲಿ 42 ಮಿಲಿಯನ್ ಜನರು ಭಾರತದಲ್ಲಿ ಇದ್ದಾರೆ ಎಂದರು. 
ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು:
ಎನ್‍ಎಚ್ ಹೆಲ್ತ್ ಸಿಟಿ, ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದ್ದು, ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಜುಂದಾರ್ ಶಾ ಮೆಡಿಕಲ್ ಸೆಂmರ್ (ಎಂಎಸ್‍ಎಂಸಿ), ಕ್ಯಾನ್ಸರ್ ಚಿಕಿತ್ಸೆಗಾಗಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ನರರೋಗ ಚಿಕಿತ್ಸೆ, ನೆಫ್ರೋಲಜಿ, ಯುರಾಲಜಿ ವಿಭಾಗಗಳಿವೆ. ಭಾರತದ ಅತಿದೊಡ್ಡ ಬೋನ್‍ಮಾರೊ ಕಸಿ ಘಟಕವನ್ನು ಆಸ್ಪತ್ರೆ ಹೊಂದಿದೆ. ಎನ್‍ಎಚ್ ಹೆಲ್ತ್ ಸಿಟಿ ಸ್ಟೆಮ್‍ಸೆಲ್ ಬ್ಯಾಂಕ್ ಅನ್ನು ನಿರ್ವಹಣೆ ಮಾಡುತ್ತಿದೆ. ಎನ್‍ಎಚ್ ಇದುವರೆಗೂ 600ಕ್ಕೂ ಅಧಿಕ ಬೋನ್ ಮಾರೋ ಕಸಿಚಿಕಿತ್ಸೆ ನೆರವೇರಿಸಿದೆ. ಎನ್‍ಎಚ್ ಹೆಲ್ ಸಿಟಿ ಸ್ಟೆಮ್ ಸೆಲ್ ಬ್ಯಾಂಕ್ ಅನ್ನು ನಿರ್ವಹಣೆ ಮಾಡುತ್ತಿದೆ.
ನಾರಾಯಣ ಹೆಲ್ತ್ ಕುರಿತು:
ವಿಶ್ವದರ್ಜೆ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಸೌಲಭ್ಯದೊಂದಿಗೆ ನಾರಾಯಣ ಹೆಲ್ತ್, ಎಲ್ಲರಿಗೂ ಒಂದೇ ಚಾವಣಿಯಡಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ. ಡಾ.ದೇವಿಶೆಟ್ಟಿ ಅವರು ಸ್ಥಾಪಿಸಿದ, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ನಾರಾಯಣ ಹೆಲ್ತ್ ಗ್ರೂಪ್ ದೇಶz ಎರಡನೇ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿದೆ.
2000ರಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 225 ಹಾಸಿಗೆ ಸಾಮಥ್ರ್ಯದ ಸೌಲಭ್ಯದೊಂದಿಗೆ ಆರಂಭವಾಯಿತು. ಕಂಪೆನಿಯು ಇಂದು ವಿವಿಧೆಡೆ  ಆಸ್ಪತ್ರೆಗಳನ್ನು ನಿರ್ವಹಣೆ ಮಾಡುತ್ತಿದ್ದು, ಇದರಲ್ಲಿ  24 ಆಸ್ಪತ್ರೆಗಳು 7 ಹಾರ್ಟ್ ಸೆಂಟರ್‍ಗಳು ದೇಶಾದ್ಯಂತ ಇದ್ದು, 5900 ಹಾಸಿಗೆ ಸಾಮಥ್ರ್ಯದಿಂದ 7100 ಹಾಸಿಗೆಗಳ ಸಾಮಥ್ರ್ಯಕ್ಕೆ ವಿಸ್ತರಣೆಯಾಗಿದೆ. ಇದರಲ್ಲಿ ಪ್ರದೇಶಾನುಸಾರ ಆರೈಕೆ ಸೇವೆ, 7 ಹೃದಯ ಚಿಕಿತ್ಸಾ ಕೇಂದ್ರಗಳು ಸೇರಿವೆ). ವಿವರಗಳಿಗೆ ಭೇಟಿ ಕೊಡಿ: www.narayanahealth.org 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರೇಣು ಪ್ರವೀಣ್ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |   9742279654    
ರಾಗಿಣಿ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |  9513339906
ವಸಂತ ಕುಮಾರ್ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |  9880938950
 

Read These Next

ರಾಜ್ಯಾದ್ಯಂತ ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ; ಅಧಿಕಾರಿಗಳ ಕಾರ್ಯಕ್ಷಮತೆಗೆ ಮೆಚ್ಚುಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯ ಹಿನ್ನೆಲೆಯಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ನಡೆದ ...

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (AIITA) ರಾಷ್ಟ್ರೀಯ ಶೈಕ್ಷಣಿಕ ಅಭಿಯಾನಕ್ಕೆ ಚಾಲನೆ

ಬೆಂಗಳೂರು:  ಸೆಪ್ಟೆಂಬರ್ 24 ರಿಂದ ಅ.15 ರ ವರೆಗೆ  “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ Enlightening Teachers, Nurturing Talents , Transforming Society ...

ಬಿಜೆಪಿಯ 25 ಮಂದಿ ಸಂಸದರು ದಂಡಪಿಂಡಗಳು. ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಜನದ್ರೋಹ ಎಸಗಿದೆ: ಬಿ.ವಿ.ಶ್ರೀನಿವಾಸ್

ಬೆಂಗಳೂರು : ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಬಿಜೆಪಿ ನಿರಂತರವಾಗಿ, ಚರಿತ್ರೆಯುದ್ದಕ್ಕೂ ಜನದ್ರೋಹ ಎಸಗುತ್ತಿರುವ ...

ಬಿಜೆಪಿ ಟಿಕೆಟ್ ಕೊಡಿಸುವುದಾಗಿ 185 ಕೋ.ರೂ. ಅವ್ಯವಹಾರ; 17ಕ್ಕೂ ಹೆಚ್ಚು ಮಂದಿಗೆ ವಂಚಿಸಿದ ಚೈತ್ರಾ ಕುಂದಾಪುರ; ಕೆಪಿಸಿಸಿ ಆರೋಪ

ಚೈತ್ರಾ ಕುಂದಾಪುರ ಅವರಿಂದ ಒಟ್ಟು 17ಕ್ಕೊ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಮಂದಿಗೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. 40 ...

ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ; ಒಡಿಶಾದಲ್ಲಿ ಹಾಲಶ್ರೀ ಬಂಧನ

ಬಿಜೆಪಿ ಟಿಕೆಟ್ ಹೆಸರಿ ನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣದ ಆರೋಪಿ ಹೊಸ ಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ...

ಮತ್ತೆ ಶರಣರ ತಲೆದಂಡವಾಗದಿರಲಿ

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಜಿಲ್ಲೆಯನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ನೆರವು ; ಸಚಿವ ಮಂಕಾಳ ವೈದ್ಯ

ಕಾರವಾರ : ಜಿಲ್ಲೆಯನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದೆ ಬರುವ ಹೂಡಿಕೆದಾರರಿಗೆ ಎಲ್ಲಾ ...

ಭಟ್ಕಳ: ವಿಶ್ವ ಕುರಾನ್‌ ಪಠಣ ಸ್ಪರ್ಧೆಯಲ್ಲಿ ವಿಜೇತ ಇಬ್ರಾಹಿಂಗೆ ತಂಜೀಮ್ ಮತ್ತು ಫೆಡರೇಷನ್ ಮುಖಂಡರಿಂದ ಸ್ವಾಗತ

ಇತ್ತೀಚಿಗೆ ಸೌದಿಅರೇಬಿಯಾದಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಇಲ್ಲಿನ ಕಾರಗದ್ದೆ ನಿವಾಸಿ ...