ಮುಂಡಗೋಡ : ಮುಂಡಗೋಡದ ನವಚೇತನ ಯುವಕ ಮಂಡಳ ಟ್ರಸ್ಟನವರು ಇಲ್ಲಿಯ ವಿವೇಕಾನಂದ ಬಯಲುರಂಗ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ ಬಾಲಕೃಷ್ಣನ ವೇಷ ಭೂಷಣ ಸ್ಪರ್ಧೆ ಮತ್ತು ರಾಧಾಕೃಷ್ಣ ರೂಪಕ ಸ್ಪರ್ಧೆಯು ಜನಮನ ಸೆಳೆಯಿತು.
ಬಾಲಕೃಷ್ಣನ ವೇಷ ಭೂಷಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆದೀಷ ಅಭಿಲಾಷ ನ್ಯಾಸರ್ಗಿ, ದ್ವಿತೀಯ ಬಹುಮಾನವನ್ನು ತನ್ಮಯ ರಾಯ್ಕರ್, ತೃತೀಯ ಬಹುಮಾನವನ್ನು ಉನ್ನತಿ ಗಾಣಿಗೇರ ಪಡೆದುಕೊಂಡಿದ್ದಾರೆ.
ಬಾಲಕೃಷ್ಣನ ವೇಷ ಭೂಷಣ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆಯುಷ ರಮೇಶರಾವ್, ದ್ವಿತೀಯ ಬಹುಮಾನವನ್ನು ಸಾನ್ವಿ ಸುಜಿತ್ ಮತ್ತು ತೃತೀಯ ಬಹುಮಾನವನ್ನು ಧೀರಜ ಪಿ.ಡಿ. ಮತ್ತು ತನ್ಮಯ ಸುರೇಶಗೌಡ ಪಡೆದುಕೊಂಡಿದ್ದಾರೆ.
ರಾಧಾಕೃಷ್ಣ ರೂಪಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಮಿತಾ ರಾಜಶೇಖರ ನಾಯ್ಕ ಮತ್ತು ಅಂಕಿತಾ ಮನೋಜಕುಮಾರ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಆಧ್ಯಾ ರಮೇಶರಾವ್ ಮತ್ತು ನಿಶ್ಚಲ್ ಗಳಗಿ ಹಾಗೂ ತೃತೀಯ ಬಹುಮಾನವನ್ನು ಧೀರಜ ಪಿ.ಡಿ. ಮತ್ತು ಮೇಧಾ ಪಿ.ಡಿ. ಪಡೆದುಕೊಂಡಿದ್ದಾರೆ.
ಸ್ಪರ್ಧಾ ನಿರ್ಣಾಯಕರಾಗಿ ಮಾಲತೇಶ ಹುಬ್ಬಳ್ಳಿ, ದಯಾನಂದ ನಾಯ್ಕ, ಅಜಿತ ನಾಗರಕಟ್ಟೆ, ಮನೋಜ ಪಾಲೇಕರ ಶಿರಸಿ, ಬಾಲಚಂದ್ರ ಹೆಗಡೆ ಮತ್ತು ಜ್ಯೋತಿ ಮೊಗವೀರ ಆಗಮಿಸಿದ್ದರು. ನವಚೇತನ ಯುವಕ ಮಂಡಳ ಟ್ರಸ್ಟ ಅಧ್ಯಕ್ಷರಾದ ಮಾರುತಿ ಓಂಕಾರ, ಬಾಲಕೃಷ್ಣ ರೂಪಕ ಸ್ಪರ್ಧಾ ಸಮಿತಿ ವ್ಯವಸ್ಥಾಪಕರಾದ ಜಗದೀಶ ಕಾನಡೆ, ಶ್ರೀಧರ ಛಬ್ಬಿ ಮುಂತಾದವರಿದ್ದರು. ದಿನೇಶ ವೆರ್ಣೇಕರ ಕಾರ್ಯಕ್ರಮ ನಿರೂಪಿಸಿದರು.