ಭಟ್ಕಳದಲ್ಲಿ ಮೊಳಗಿದ 2ಎ ಉಳಿಸಿ ಪ್ರತಿಭಟನೆ. ಹಿಂದುಳಿದ ವರ್ಗಗಳ ಸಮುದಾಯದಿಂದ ಬೃಹತ್ ಪ್ರತಿಭಟನಾ ರ್ಯಾಲಿ.
Source: SO News |
By Laxmi Tanaya |
Published on 22nd February 2021, 6:40 PM |
Coastal News |
Don't Miss |
ಭಟ್ಕಳ : ಹಿಂದುಳಿದ ವರ್ಗ 2ಎ ಮೀಸಲಾತಿಯನ್ನ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಭಟ್ಕಳದಲ್ಲಿ ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಭಟ್ಕಳ ತಾಲೂಕಿನ ಪುರವರ್ಗದಲ್ಲಿ ಸೇರಿದ ಸಹಸ್ರಾರು ಸಂಖ್ಯೆಯ ನಾಗರಿಕರು ಬೃಹತ್ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪ್ರತಿಭಟನಾಕಾರರು ಚೌಥನಿ, ಮುಖ್ಯರಸ್ತೆ, ಸಂಶುದ್ಧಿನ್ ಸರ್ಕಲ್ ಮೂಲಕ ಪೊಲೀಸ್ ಮೈದಾನದಲ್ಲಿ ಸಮಾವೇಶಗೊಂಡಿತು.
ಪ್ರಬಲ ಸಮುದಾಯವಾದ ಪಂಚಮಶಾಲಿ ಲಿಂಗಾಯತ್ ಸಮುದಾಯದವರನ್ನ ಯಾವುದೇ ಕಾರಣದಿಂದಲೂ 2 ಎಗೆ ಸೇರಿಸದಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ಸಮಾವೇಶ ನಡೆಯಿತು.