ಮುಂಡಗೋಡ : ದೇಶವೇ ಲಾಕ್ಡೌನ್ ನಂತರ ಎಲ್ಲ ಅಂಗಡಿ ಮುಗಟ್ಟುಗಳು ಬಂದ ಆದನಂತರ ಜಾನುವಾರುಗಳು ಹಸಿವಿಯಿಂದ ಬಳಲುತ್ತಿರುವುದನ್ನುಕಂಡ ಅಯ್ಯಪ್ಪ ಭಜಂತ್ರಿ ಮೇವು ತಂದು ಮೂಕ ಪ್ರಾಣಿಗಳ ಹಸಿವನ್ನು ನಿಗಿಸಿದ್ದಾರೆ.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಯಾರೂ ದಿಕ್ಕು ದೆಸೆಯಿಲ್ಲದ ಅಲೆದಾಡುತ್ತಿದ್ದ ಜಾನುವಾರಗಳಿಗೆ ಮೇವಿನ ಕೊರತೆಯಿಂದ ಬಳಲುತ್ತಿದ್ದನ್ನು ಕಂಡ ನ್ಯಾಸರ್ಗಿ ಗ್ರಾಮದ ಯುವಕ ಅಯ್ಯಪ್ಪ ಭಜಂತ್ರಿ ತಹಶೀಲ್ದಾರ ಬಳಿ ಮೇವು ತರಲು ಪರವಾನಿಗೆ ಪಡೆದು ತನ್ನ ಸ್ವಂತ ಹಣದಿಂದ ಖರಿದೀಸಿ ಇಲ್ಲವೆ ಇತರರು ದಾನವಾಗಿ ನೀಡಿದ ಹುಲ್ಲನ್ನು ಜಾನುವಾರಗಳಿಗೆ ಮೇವು ಹಾಕಿ ಮೂಕಪ್ರಾಣಿಗಳ ಹಸಿವನ್ನು ನಿಗಿಸುತ್ತಿರುವುದು ಪ್ರಶಂಸನಿಯ ಎಂಬ ಮಾತು ಕೇಳುಬರುತ್ತಿದೆ. ಪಟ್ಟಣದಲ್ಲಿ ಸಾಮನ್ಯವಾಗಿ ಬಸ್ ಸ್ಟ್ಯಾಂಡ ಹತ್ತಿರ, ಶಿವಾಜಿ ಸರ್ಕಲ್ ಹತ್ತಿರ, ಪಟ್ಟ್ಣ ಪಂಚಾಯತ್ ಹತ್ತಿರ ಸೇರಿದಂತೆ ದನಗಳು ಎಲ್ಲಲ್ಲಿ ಗುಂಪುಕಟ್ಟಿ ನಿಂತಿರುತ್ತವೇಯೋ ಅಂತಹ ಪ್ರದೇಶಗಳಿಗೆ ತೆರಳಿ ಹುಲ್ಲನ್ನು ಹಾಕುತ್ತಿರುವುದು ಕಂಡುಬಂದಿತು