ಮಂಗಳೂರು : ತಾಲೂಕಿನ ಮರೋಳಿ ಬಳಿ ಬುಧವಾರ ಬೆಳಗ್ಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟಿದ್ದಾರೆ .
ಮಂಗಳೂರು ಗ್ರಾಮಾಂತರ ಪೊಲೀಸ್ ಸ್ಟೇಷನ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್ ಲಾರಿಗೆ ಪಡೀಲ್ ಕಡೆಯಿಂದ ಬಂದ ರಿಕ್ಷಾ ಹತೋಟಿ ತಪ್ಪಿ ಹಿಂದಿನಿಂದ ಡಿಕ್ಕಿಯಾಗಿದೆ . ತೀವ್ರ ಗಾಯಗೊಂಡ ರಿಕ್ಷಾ ಚಾಲಕ ವಲಾಚಿಲ್ ಮೂಲದ ಸಲೀಂ (40) ಎಂಬವರನ್ನು ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ .
ಇನ್ನೂ ರಿಕ್ಷಾದಲ್ಲಿದ್ದ ಇಬ್ಬರು ಮತ್ತು ಪಾದಚಾರಿ ಸೇರಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜಾಮುದ್ದೀನ್ , ಸಿಯಾಬ್ ಮತ್ತು ಪಾದಚಾರಿ ಗಾಯಗೊಂಡವರಾಗಿದ್ದಾರೆ. ಆಟೋ ಮಲ್ಪೆ ಕಡೆ ತೆರಳುತಿತ್ತು.