ಪ. ಬಂಗಾಳ ಚುನಾವಣೆ: ದುರಹಂಕಾರ, ಹಣಬಲ, ಒಡೆದಾಳುವ ನೀತಿ ಸೋತಿದೆ –ಕಪಿಲ್ ಸಿಬಲ್
ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಗೆಲುವು ಸಾಧಿಸಿರುವುದಕ್ಕೆ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅಭಿನಂದಿಸಿದ್ದಾರೆ.
‘ಈ ಚುನಾವಣೆಯಲ್ಲಿ ದುರಹಂಕಾರ, ಹಣದ ಬಲ ಮತ್ತು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ರಾಜಕೀಯಕ್ಕೆ ಬಳಸಿಕೊಂಡವರಿಗೆ ಸೋಲಾಗಿದೆ‘ ಎಂದು ಬಿಜೆಪಿಯ ಹೆಸರು ಉಲ್ಲೇಖಿಸಿದೆ ಸಿಬಲ್ ಟ್ವೀಟ್ ಮಾಡಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಯಾರು ಸೋತರು: ದುರಹಂಕಾರ, ಹಣ ಬಲ, ಜೈ ಶ್ರೀರಾಮ್ ಘೋಷಣೆಯನ್ನು ರಾಜಕೀಯಕ್ಕಾಗಿ ಬಳಸಿದ್ದು, ಒಡೆದು ಆಳುವ ಕಾರ್ಯಸೂಚಿ ಮತ್ತು ಚುನಾವಣಾ ಆಯೋಗ‘ ಎಂದು ಸಿಬಲ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
‘ಆಕೆ ಅವೆಲ್ಲವನ್ನೂ ಎದುರಿಸಿ ಅವರ ವಿರುದ್ಧ ಜಯಗಳಿಸಿದ್ದಾರೆ‘ ಎಂದು ಮಮತಾ ಗೆಲುವನ್ನು ಶ್ಲಾಘಿಸಿದ್ದಾರೆ.