ನಾಗಾಲ್ಯಾಂಡ್ ಗೋಲಿಬಾರ್ ಪ್ರಕರಣ; ಸೇನೆಯ ನಿರ್ಲಕ್ಷದ ದಾಳಿ ಕೊಲೆಗೆ ಸಮಾನ; ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾ.ಲೋಕೂರ್
ಹೊಸದಿಲ್ಲಿ,: ಶಸ್ತ್ರ ಪಡೆಗಳ ವಿಶೇಷಾಧಿಕಾರ (ಎಎಫ್ಎಸ್ಪಿಎ) ಎಂದರೆ ಭದ್ರತಾ ಪಡೆಗಳು ಸುಮ್ಮನೆ ಯಾರನ್ನೂ ಕೊಲ್ಲಬಹುದು ಎಂದು ಅರ್ಥವಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮದನ್ ಲೋಕೂರ್ ಸೋಮವಾರ ಹೇಳಿದ್ದಾರೆ.
ನಾಗಾಲ್ಯಾಂಡ್ನಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಸೇನೆಯ ಹೊಂಚುದಾಳಿ ಸಂದರ್ಭ 14 ಮಂದಿ ನಾಗರಿಕರು ಮೃತಪಟ್ಟ ಕುರಿತಂತೆ ಆಕ್ರೋಶ ವಾಗಿರುವ ನಡುವೆ ಲೋಕೂರ್ ಅವರು ಈ ಹೇಳಿಕೆ ನೀಡಿದ್ದಾರೆ.
ಎಎಫ್ಎಸ್ಪಿಎ ಜಾರಿಗೊಳಿಸಿದ ರಾಜ್ಯದ ಎಲ್ಲಿಯೂ ಕೂಡ ಕಾರ್ಯಾಚರಣೆ ನಡೆಸುವ ಹಾಗೂ ವಾರಂಟ್ ಇಲ್ಲದೆ ಯಾರನ್ನೂ ಬಂಧಿಸುವ ವಿಶೇಷಾಧಿಕಾರವನ್ನು ಸೇನೆಗೆ ನೀಡುತ್ತದೆ. ಈ ಎಎಫ್ಎಸ್ ಪಿಎ ಅತ್ಯಂತ ದೋಷಪೂರಿತವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
“ಈ ಘಟನೆ ಬಗ್ಗೆ ಗಣ್ಯ ವ್ಯಕ್ತಿಯಿಂದ ಸ್ವತಂತ್ರ ತನಿಖೆ ನಡೆಯಬೇಕು ಎಂದು ನಾನು ಬಯಸುತ್ತೇನೆ. ಸರಕಾರಿ ತನಿಖಾ ಸಂಸ್ಥೆಗಳು ತನಿಖೆ ನಡೆಸಿದರೆ, ಭದ್ರತಾ ಪಡೆಗಳು ಘಟನೆಯನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ' ಎಂದ ಲೋಕೂರ್ ಹೇಳಿದರು.