ಕಾರವಾರ:ರಾಜ್ಯ ಸರಕಾರವು ಸೇವಾ ಸಿಂಧು ಯೋಜನೆಯನ್ನು ಪ್ರಾರಂಬಿಸಿದ್ದು, ಸರಕಾರದ ಸೇವೆಗಳು ನಾಗರಿಕರ ಮನೆ ಬಾಗಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಸೇವೆಗೆ ಯಾವುದೇ ಶುಲ್ಕವಿರುವುದಿಲ್ಲ ಆದರೆ ಸೇವಾ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ರೂ. 30 ಮಾತ್ರ ಶುಲ್ಕ ಪಾವತಿಸಿ ಸೇವೆಯನ್ನು ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾ ಕನ್ನಡ ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
2019-20ನೇ ಸಾಲಿನಲ್ಲಿ ಸಾಮಾನ್ಯ ಎಸ್.ಸಿ.ಎಸ್.ಪಿ ಮತ್ತು ಟಿ ಎಸ್.ಪಿ ಯೋಜನೆಯಡಿ ಪ್ರಾಯೋಜನೆ ಪಡೆಯಲ್ಲಿಚ್ಚಿಸುವ ಸಂಘ /ಸಂಸ್ಥೆಗಳು ಕಡ್ಡಾಯವಾಗಿ ಆನ್ ಲೈನ್ (ಸೇವಾ ಸಿಂಧು) ಮೂಲಕ ಅರ್ಜಿಯನ್ನು ವೆಬ್ ಪೋರ್ಟಲ್ http:sevasindhu.karnataka.gov.in ಸಲ್ಲಿಸಿದ್ದಲ್ಲಿ ಕಾರ್ಯಕ್ರಮಕ್ಕೆ ಕಲಾತಂಡಗಳ ಪ್ರಾಯೋಜನೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.