ವಿಮೆಯ ಏಜೆಂಟ್ಗಳಿಗಾಗಿ ಅರ್ಜಿ ಆಹ್ವಾನ
ಕಾರವಾರ: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಏಜೆಂಟ್ಗಳಾಗಿ ಜಿಲ್ಲೆಯ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು 18 ರಿಂದ 60 ವರ್ಷದೊಳಗಿನವರಾಗಿದ್ದು, ಎಸ್ಎಸ್ಎಲ್ಸಿ/ ಪಿಯುಸಿ ಪಾಸಾಗಿರಬೇಕು. ಅಭ್ಯರ್ಥಿ ಪಡೆದುಕೊಂಡ ಪಾಲಿಸಿಗಳ ಮೇಲೆ ವೇತನ ನೀಡಲಾಗುತ್ತಿದ್ದು, ನಿಗದಿತ ವೇತನ ಇರುವುದಿಲ್ಲ. ಆಸಕ್ತರು ತಮ್ಮ ಸಮೀಪದ ಅಂಚೆ ಕಛೇರಿಯಲ್ಲಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 18 ರೊಳಗಾಗಿ ‘ಅಂಚೆ ಅಧೀಕ್ಷಕರು’ ಕಾರವಾರ ವಿಭಾಗ, ಕಾರವಾರ-581301 ವಿಳಾಸಕ್ಕೆ ಕಳುಹಿಸಬಹುದು.
ಇಮೇಲ್: [email protected] ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳ ಪ್ರಾಥಮಿಕ ಪರಿಶೀಲನೆಯ ನಂತರ ಡಿಸೆಂಬರ್ 21ರಂದು ಸಂದರ್ಶನದ ಮೂಲಕ ನೇಮಕಾತಿ ನಡೆಸಲಾಗುತ್ತದೆ ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.