ಕಾರವಾರ: ಜಿಲ್ಲಾ ಗ್ರಾಹಕ ಸ್ವಂತ ಕಟ್ಟಡವನ್ನು ತೆರವುಗೊಳಿಸುತ್ತಿರುವ ಕುರಿತು ಪ್ರಕಟಣೆ
ಕಾರವಾರ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸ್ವಂತ ಕಟ್ಟಡವನ್ನು ತೆರವುಗೊಳಿಸುತ್ತಿರುವ ಕಾರಣ ಅ.8 ರಿಂದ ಕಛೇರಿ ಮತ್ತು ನ್ಯಾಯಿಕ ಕಲಾಪಗಳನ್ನು ಇನ್ನು ಮುಂದೆ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗ, ಹಳೆ ನಗರಸಭೆ ಕಚೇರಿ, ಮಾಲಾದೇವಿ ಮೈದಾನ ಎದುರು, ಕಾರವಾರ 581301 ಹೊಸ ವಿಳಾಸವಾದಲ್ಲಿಯೇ ನಡೆಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಅನಸೂಯ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.