ವಿಮಾನ ನಿಲ್ದಾಣದಲ್ಲಿ ಪಿಸ್ತೂಲ್ ಜೊತೆ ಆನಂದ ಅಸ್ನೋಟಿಕರ್.
ಬೆಂಗಳೂರು : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತೆ ಸುದ್ದಿಯಾಗಿದ್ದಾರೆ.ಬೆಂಗಳೂರು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಸ್ತೂಲ್ ಜೊತೆ ತಪಾಸಣೆಗೊಳಗಾಗಿದ್ದಾರೆ.
ಇಂದು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಸ್ನೋಟಿಕರ್ ಬ್ಯಾಗ್ ನಲ್ಲಿ ಪಿಸ್ತೂಲ್ ಇರಿಸಿಕೊಂಡಿದ್ದರು. ಇನ್ನೇನು ಕೆಲ ಹೊತ್ತಿನಲ್ಲಿ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಬೇಕಾಗಿತ್ತು. ಆದರ ತಮ್ಮ ಬಳಿ ಪಿಸ್ತೂಲ್ ಇರುವ ಬಗ್ಗೆ ಅಧಿಕಾರಿಗಳಿಗೆ ಮೊದಲು ಮಾಹಿತಿ ನೀಡಿರಲಿಲ್ಲ.
ಪ್ರಯಾಣಿಕರ ತಪಾಸಣೆಯಲ್ಲಿ ತೊಡಗಿದ್ದ ಸಿಐಎಸ್ಎಪ್ ಸಿಬ್ಬಂದಿ ಎಲ್ಲರಂತೆ ಅಸ್ನೋಟಿಕರ್ ಅವರನ್ನ ತಪಾಸಿಸಿದ್ದರು. ಈ ವೇಳೆ ಪಿಸ್ತೂಲ್ ಕಂಡು ಹೌಹಾರಿದ್ದಾರೆ.
ತಕ್ಷಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆನಂದ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಆಗ ತಮ್ಮ ದಾಖಲೆ ತೋರಸಿ ಪರವಾನಗಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಎನ್ನಲಾಗಿದೆ. ಹೀಗಾಗಿ ಮತ್ತೆ ಆನಂದ ಅಸ್ನೋಟಿಕರ್ ಸುದ್ದಿಯಾಗಿದ್ದಾರೆ.