ಕಾರವಾರ : ಸೊಪ್ಪು ತರಲು ಅರಣ್ಯಕ್ಕೆ ಹೋದಾಗ ಹಾವು ಕಡಿದಿದ್ದರಿಂದ ವೃದ್ದನೋರ್ವ ಅದೇ ಹಾವನ್ನೆ ಜೇಬಿನಲ್ಲಿ ಇರಿಸಿ ತಂದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಗಾಯಗೊಂಡವರು. ದನದ ಕೊಟ್ಟಿಗೆಗಾಗಿ ಸೊಪ್ಪು ತರಲು ಬಲೀಂದ್ರ ಕಾಡಿಗೆ ಹೋಗಿದ್ದರು. ಕಾಡಿನಲ್ಲಿ ವಿಷಪೂರಿತ ಹಾವಿನ ಮರಿಯೊಂದು ಕಡಿದಿದ್ದರಿಂದ ಕಾಲಿಗೆ ಗಾಯವಾಗಿತ್ತು.
ಕಡಿದ ಹಾವಿನ ಮರಿಯನ್ನ ವೈದ್ಯರಿಗೆ ತೋರಿಸಬೇಕೆಂದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಜೇಬಿನಲ್ಲಿರಿಸಿಕೊಂಡಿದ್ದಾರೆ. ಬಳಿಕ ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗಿದೆ.