ಅಂಕೋಲಾದಲ್ಲಿ ಕಡಿದ ಹಾವನ್ನ ಜೇಬಿನಲ್ಲಿರಿಸಿ ಆಸ್ಪತ್ರೆಗೆ ಬಂದ ವೃದ್ಧ.

Source: SO News | By Laxmi Tanaya | Published on 22nd September 2020, 10:29 PM | Coastal News | Don't Miss |

ಕಾರವಾರ : ಸೊಪ್ಪು ತರಲು ಅರಣ್ಯಕ್ಕೆ ಹೋದಾಗ  ಹಾವು ಕಡಿದಿದ್ದರಿಂದ ವೃದ್ದನೋರ್ವ ಅದೇ ಹಾವನ್ನೆ ಜೇಬಿನಲ್ಲಿ ಇರಿಸಿ ತಂದ ಘಟನೆ ಅಂಕೋಲಾದಲ್ಲಿ ನಡೆದಿದೆ. 

ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಗಾಯಗೊಂಡವರು. ದನದ ಕೊಟ್ಟಿಗೆಗಾಗಿ ಸೊಪ್ಪು ತರಲು ಬಲೀಂದ್ರ ಕಾಡಿಗೆ ಹೋಗಿದ್ದರು. ಕಾಡಿನಲ್ಲಿ ವಿಷಪೂರಿತ  ಹಾವಿನ ಮರಿಯೊಂದು ಕಡಿದಿದ್ದರಿಂದ ಕಾಲಿಗೆ ಗಾಯವಾಗಿತ್ತು. 

ಕಡಿದ ಹಾವಿನ ಮರಿಯನ್ನ ವೈದ್ಯರಿಗೆ ತೋರಿಸಬೇಕೆಂದು  ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಜೇಬಿನಲ್ಲಿರಿಸಿಕೊಂಡಿದ್ದಾರೆ. ಬಳಿಕ ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರ ಸಲಹೆ ಮೇರೆಗೆ  ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...